ಅಸ್ಪೃಶ್ಯತೆ ಹುಟ್ಟಿದ್ದು ಕೊಳಕಿನಿಂದಲ್ಲ
ಪ್ರೊ. ಎಂ. ಯು. ಕೃಷ್ಣಯ್ಯ `ಅಸ್ಪೃಶ್ಯತೆ ಹುಟ್ಟಿದ್ದೇ ಕೊಳಕಿನಿಂದ' ಎಂಬ ವಾದವೊಂದನ್ನು ಮಂಡಿಸಿದ್ದಾರೆ (ಜಾತಿ ಸಂವಾದ, ಮಾರ್ಚ್ 4). ಚಪ್ಪಲಿ ಹೊಲೆಯುವವರ, ಕಮ್ಮೋರಿಕೆ ಮಾಡುವವರ ವೃತ್ತಿ ಕೊಳಕಾದುದು. ಕೊಳಕು ಮೆತ್ತಿಕೊಂಡ ಜನ ಕೊಳಕರಾದರು. ಜನ ಅವರನ್ನು ಊರಿನಿಂದಾಚೆ ನಿಲ್ಲಿಸಿದರು. ಹಾಗಾಗಿ ಅವರಿಗೆ ಅಸ್ಪೃಶ್ಯತೆ ಅಂಟಿತು ಎಂದು ಬರೆದಿದ್ದಾರೆ. ಇದನ್ನು ಅವರು ಎಲ್ಲಿ ಓದಿದರೋ ಅಥವ ತಮ್ಮ ಅನುಭವದಿಂದ ಇದನ್ನು ಸುಮ್ಮನೆ ಹೇಳಿದರೋ ನಾನು ಅರಿಯೆ.Last Updated 10 ಮಾರ್ಚ್ 2013, 19:59 IST