<p><strong>ಬೆಂಗಳೂರು:</strong> ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿ ಟಿಕೆಟ್ ವಿತರಣಾ ಕೇಂದ್ರದ ಬಳಿ ಇರುವ ಶೌಚಾಲಯದ ನಲ್ಲಿ ನೀರನ್ನು ಜ್ಯೂಸ್ ಮಳಿಗೆಗಳು ಬಳಸುತ್ತಿವೆಯೇ?</p>.<p>ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ಸೆರೆ ಹಿಡಿದಿರುವ ವಿಡಿಯೊ ಇಂತಹ ಸಂದೇಹವನ್ನು ಹುಟ್ಟುಹಾಕಿದೆ. ಕಳೆದ ಭಾನುವಾರ ಪ್ರವಾಸಿಗರೊಬ್ಬರು ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ್ದಾಗ ಬಾಲಕನೊಬ್ಬ ಶೌಚಾಲಯದ ನಲ್ಲಿ ನೀರನ್ನು ಕೈತೊಳೆಯುವ ಬೇಸಿನ್ಗೆ ಬಿಟ್ಟು, ಅದರ ಮೂಲಕ ಪ್ಲಾಸ್ಟಿಕ್ ಕ್ಯಾನ್ಗೆ ತುಂಬಿಸಿಕೊಳ್ಳುತ್ತಿದ್ದ. ಈ ದೃಶ್ಯ ಸೆರೆ ಹಿಡಿದಿದ್ದ ಪ್ರವಾಸಿಗರೊಬ್ಬರು ಈ ವಿಚಾರವನ್ನು ಜೈವಿಕ ಉದ್ಯಾನದ ಆಡಳಿತದ ಗಮನಕ್ಕೆ ತಂದಿದ್ದರು.</p>.<p>‘ನಾನು ಬಾಲಕನಲ್ಲಿ ವಿಚಾರಿಸಿದಾಗ ಆತ ಕಬ್ಬಿನ ಹಾಲು ತಯಾರಿಸುವ ಮಳಿಗೆಯಲ್ಲಿ ಕೆಲಸಕ್ಕಿರುವುದಾಗಿ ತಿಳಿಸಿದ’ ಎಂದು ದೂರು ನೀಡಿದ್ದವರು ತಿಳಿಸಿದ್ದರು.</p>.<p>‘ಈ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜೈವಿಕ ಉದ್ಯಾನದ ವಲಯ ಅರಣ್ಯ ಅಧಿಕಾರಿಯೊಬ್ಬರಿಗೆ ಸೂಚಿಸಿದ್ದೇವೆ’ ಎಂದು ಜೈವಿಕ ಉದ್ಯಾನದ ಡಿಸಿಎಫ್ ಕುಶಾಲಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>‘ಶೌಚಾಲಯದ ನೀರನ್ನು ಕಬ್ಬಿನ ಹಾಲಿಗೆ ಬೆರೆಸಲು ಬಳಸುತ್ತಿದ್ದರು ಎಂದು ದೂರು ನೀಡಿದವರು ಹೇಳಿಲ್ಲ. ಯಂತ್ರವನ್ನು ತೊಳೆಯಲು ಈ ನೀರನ್ನು ಬಳಸಿರಬಹುದು. ಆದರೆ, ಪ್ರವಾಸಿಗರ ಆರೋಗ್ಯ ನಮಗೆ ಮುಖ್ಯ. ಇಲ್ಲಿನ ಮಳಿಗೆಗಳು, ಹೋಟೆಲ್ಗಳು ಶುಚಿತ್ವ ಕಾಪಾಡಬೇಕು ಎಂಬುದಾಗಿ ಸೂಚಿಸಿದ್ದೇವೆ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿ ಟಿಕೆಟ್ ವಿತರಣಾ ಕೇಂದ್ರದ ಬಳಿ ಇರುವ ಶೌಚಾಲಯದ ನಲ್ಲಿ ನೀರನ್ನು ಜ್ಯೂಸ್ ಮಳಿಗೆಗಳು ಬಳಸುತ್ತಿವೆಯೇ?</p>.<p>ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ಸೆರೆ ಹಿಡಿದಿರುವ ವಿಡಿಯೊ ಇಂತಹ ಸಂದೇಹವನ್ನು ಹುಟ್ಟುಹಾಕಿದೆ. ಕಳೆದ ಭಾನುವಾರ ಪ್ರವಾಸಿಗರೊಬ್ಬರು ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ್ದಾಗ ಬಾಲಕನೊಬ್ಬ ಶೌಚಾಲಯದ ನಲ್ಲಿ ನೀರನ್ನು ಕೈತೊಳೆಯುವ ಬೇಸಿನ್ಗೆ ಬಿಟ್ಟು, ಅದರ ಮೂಲಕ ಪ್ಲಾಸ್ಟಿಕ್ ಕ್ಯಾನ್ಗೆ ತುಂಬಿಸಿಕೊಳ್ಳುತ್ತಿದ್ದ. ಈ ದೃಶ್ಯ ಸೆರೆ ಹಿಡಿದಿದ್ದ ಪ್ರವಾಸಿಗರೊಬ್ಬರು ಈ ವಿಚಾರವನ್ನು ಜೈವಿಕ ಉದ್ಯಾನದ ಆಡಳಿತದ ಗಮನಕ್ಕೆ ತಂದಿದ್ದರು.</p>.<p>‘ನಾನು ಬಾಲಕನಲ್ಲಿ ವಿಚಾರಿಸಿದಾಗ ಆತ ಕಬ್ಬಿನ ಹಾಲು ತಯಾರಿಸುವ ಮಳಿಗೆಯಲ್ಲಿ ಕೆಲಸಕ್ಕಿರುವುದಾಗಿ ತಿಳಿಸಿದ’ ಎಂದು ದೂರು ನೀಡಿದ್ದವರು ತಿಳಿಸಿದ್ದರು.</p>.<p>‘ಈ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜೈವಿಕ ಉದ್ಯಾನದ ವಲಯ ಅರಣ್ಯ ಅಧಿಕಾರಿಯೊಬ್ಬರಿಗೆ ಸೂಚಿಸಿದ್ದೇವೆ’ ಎಂದು ಜೈವಿಕ ಉದ್ಯಾನದ ಡಿಸಿಎಫ್ ಕುಶಾಲಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>‘ಶೌಚಾಲಯದ ನೀರನ್ನು ಕಬ್ಬಿನ ಹಾಲಿಗೆ ಬೆರೆಸಲು ಬಳಸುತ್ತಿದ್ದರು ಎಂದು ದೂರು ನೀಡಿದವರು ಹೇಳಿಲ್ಲ. ಯಂತ್ರವನ್ನು ತೊಳೆಯಲು ಈ ನೀರನ್ನು ಬಳಸಿರಬಹುದು. ಆದರೆ, ಪ್ರವಾಸಿಗರ ಆರೋಗ್ಯ ನಮಗೆ ಮುಖ್ಯ. ಇಲ್ಲಿನ ಮಳಿಗೆಗಳು, ಹೋಟೆಲ್ಗಳು ಶುಚಿತ್ವ ಕಾಪಾಡಬೇಕು ಎಂಬುದಾಗಿ ಸೂಚಿಸಿದ್ದೇವೆ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>