<p><strong>ವಿಜಯಪುರ:</strong> ಸರ್ಕಾರದ ಅಧಿಕೃತ ಆದೇಶವಿದ್ದರೂ, ಕೆಲ ಸರ್ಕಾರಿ ಕಚೇರಿಗಳು ಹಾಗೂ ಶಾಲಾ–ಕಾಲೇಜುಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸದಿರುವುದನ್ನು ಖಂಡಿಸಿ ರಾಷ್ಟ್ರೀಯ ಬಸವ ಸೇನೆ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಎಂ.ಕನಗವಲ್ಲಿಗೆ ಮನವಿ ಸಲ್ಲಿಸಲಾಯಿತು.</p>.<p>ಸೇನೆಯ ಸ್ವಪ್ನಾ ಕಣಮುಚನಾಳ ಮಾತನಾಡಿ, ‘ವಿಶ್ವಗುರು ಬಸವಣ್ಣ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದರು. ಮೊಟ್ಟ ಮೊದಲು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಲು ಕಲ್ಯಾಣ ರಾಜ್ಯ ಕಟ್ಟಿ ವಿಶ್ವ ಶಾಂತಿಗಾಗಿ ಶ್ರಮಿಸಿದರು. ಅಂತಹ ಮಹಾನ್ ಚೇತನ ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ.</p>.<p>ಆದರೆ, ಕೆಲವು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಅವರ ಭಾವಚಿತ್ರವನ್ನು ಅಳವಡಿಸದಿರುವುದು ಖೇದಕರ ಸಂಗತಿ. ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಿ, ರಜೆಯ ಮೋಜು ಮಸ್ತಿಯಲ್ಲಿ ಕಾಲ ಕಳೆಯದೆ ಎಲ್ಲರೂ ಸಡಗರ ಸಂಭ್ರಮದಿಂದ ಬಸವ ಜಯಂತಿ ಆಚರಿಸಬೇಕು’ ಎಂದು ಒತ್ತಾಯಿಸಿದರು.</p>.<p>ಜಿಲ್ಲಾ ಘಟಕದ ಅಧ್ಯಕ್ಷ ಸೋಮನಗೌಡ ಕಲ್ಲೂರ ಮಾತನಾಡಿ, ‘ಬಸವ ಜಯಂತಿ ಒಳಗಾಗಿ ಪ್ರತಿಯೊಂದು ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳಲ್ಲಿ ಕಡ್ಡಾಯವಾಗಿ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕು. ಸರ್ಕಾರದ ಆದೇಶ ಗಾಳಿಗೆ ತೂರಿ ಬಸವಾದಿ ಶರಣರಿಗೆ ಅಪಮಾನ ಎಸಗಿದರೆಸಹಿಸುವುದಿಲ್ಲ. ಅಂತಹ ಕೃತ್ಯ ಕಂಡು ಬಂದರೆ, ಆ ಕಚೇರಿಗಳಿಗೆ ಸೇನೆಯ ಕಾರ್ಯಕರ್ತರು ಬೀಗ ಹಾಕಿ ಉಗ್ರವಾದ ಹೋರಾಟ ನಡೆಸುತ್ತಾರೆ’ ಎಂದು ಎಚ್ಚರಿಸಿದರು.</p>.<p>ಸೇನೆಯ ದಾನೇಶ ಅವಟಿ, ಆನಂದ ಜಂಬಗಿ, ಬಸವರಾಜ ಅವಜಿ, ಭೀಮಾಶಂಕರ ಪತ್ತಾರ ಮಾತನಾಡಿದರು.</p>.<p>ಶಿವು ಮಿಂಚಿನಾಳ, ಸಂತೋಷ ಪಾಟೀಲ, ತಾಹೀರ್ ಹುಸೇನ್, ಶಿವಾನಂದ ವಿಭೂತಿ, ರಾಮಣ್ಣ ವಜ್ರಮಟ್ಟಿ, ಶಿವು ಭೂತನಾಳ, ಅಮಿತ ತಂಗಾ, ಪಿಂಟು ಪಾಟೀಲ, ರಮೇಶ ಶಿರೂರ, ಪರಶುರಾಮ ಕೊಂಚಿಕೊರವರ, ಶ್ರೀಕಾಂತ ಬಿರಾದಾರ, ರವಿ ಹೂಗಾರ, ದುರಗೇಶ ಜುಮನಾಳ, ವಿಶಾಲ ಗೌಳಿ, ಶಿವು ಮನಗೂಳಿ, ಸಂತೋಷ ಕೊಂಚಿಕೊರವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಸರ್ಕಾರದ ಅಧಿಕೃತ ಆದೇಶವಿದ್ದರೂ, ಕೆಲ ಸರ್ಕಾರಿ ಕಚೇರಿಗಳು ಹಾಗೂ ಶಾಲಾ–ಕಾಲೇಜುಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸದಿರುವುದನ್ನು ಖಂಡಿಸಿ ರಾಷ್ಟ್ರೀಯ ಬಸವ ಸೇನೆ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಎಂ.ಕನಗವಲ್ಲಿಗೆ ಮನವಿ ಸಲ್ಲಿಸಲಾಯಿತು.</p>.<p>ಸೇನೆಯ ಸ್ವಪ್ನಾ ಕಣಮುಚನಾಳ ಮಾತನಾಡಿ, ‘ವಿಶ್ವಗುರು ಬಸವಣ್ಣ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದರು. ಮೊಟ್ಟ ಮೊದಲು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಲು ಕಲ್ಯಾಣ ರಾಜ್ಯ ಕಟ್ಟಿ ವಿಶ್ವ ಶಾಂತಿಗಾಗಿ ಶ್ರಮಿಸಿದರು. ಅಂತಹ ಮಹಾನ್ ಚೇತನ ನಮ್ಮ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ.</p>.<p>ಆದರೆ, ಕೆಲವು ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಅವರ ಭಾವಚಿತ್ರವನ್ನು ಅಳವಡಿಸದಿರುವುದು ಖೇದಕರ ಸಂಗತಿ. ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಿ, ರಜೆಯ ಮೋಜು ಮಸ್ತಿಯಲ್ಲಿ ಕಾಲ ಕಳೆಯದೆ ಎಲ್ಲರೂ ಸಡಗರ ಸಂಭ್ರಮದಿಂದ ಬಸವ ಜಯಂತಿ ಆಚರಿಸಬೇಕು’ ಎಂದು ಒತ್ತಾಯಿಸಿದರು.</p>.<p>ಜಿಲ್ಲಾ ಘಟಕದ ಅಧ್ಯಕ್ಷ ಸೋಮನಗೌಡ ಕಲ್ಲೂರ ಮಾತನಾಡಿ, ‘ಬಸವ ಜಯಂತಿ ಒಳಗಾಗಿ ಪ್ರತಿಯೊಂದು ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳಲ್ಲಿ ಕಡ್ಡಾಯವಾಗಿ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕು. ಸರ್ಕಾರದ ಆದೇಶ ಗಾಳಿಗೆ ತೂರಿ ಬಸವಾದಿ ಶರಣರಿಗೆ ಅಪಮಾನ ಎಸಗಿದರೆಸಹಿಸುವುದಿಲ್ಲ. ಅಂತಹ ಕೃತ್ಯ ಕಂಡು ಬಂದರೆ, ಆ ಕಚೇರಿಗಳಿಗೆ ಸೇನೆಯ ಕಾರ್ಯಕರ್ತರು ಬೀಗ ಹಾಕಿ ಉಗ್ರವಾದ ಹೋರಾಟ ನಡೆಸುತ್ತಾರೆ’ ಎಂದು ಎಚ್ಚರಿಸಿದರು.</p>.<p>ಸೇನೆಯ ದಾನೇಶ ಅವಟಿ, ಆನಂದ ಜಂಬಗಿ, ಬಸವರಾಜ ಅವಜಿ, ಭೀಮಾಶಂಕರ ಪತ್ತಾರ ಮಾತನಾಡಿದರು.</p>.<p>ಶಿವು ಮಿಂಚಿನಾಳ, ಸಂತೋಷ ಪಾಟೀಲ, ತಾಹೀರ್ ಹುಸೇನ್, ಶಿವಾನಂದ ವಿಭೂತಿ, ರಾಮಣ್ಣ ವಜ್ರಮಟ್ಟಿ, ಶಿವು ಭೂತನಾಳ, ಅಮಿತ ತಂಗಾ, ಪಿಂಟು ಪಾಟೀಲ, ರಮೇಶ ಶಿರೂರ, ಪರಶುರಾಮ ಕೊಂಚಿಕೊರವರ, ಶ್ರೀಕಾಂತ ಬಿರಾದಾರ, ರವಿ ಹೂಗಾರ, ದುರಗೇಶ ಜುಮನಾಳ, ವಿಶಾಲ ಗೌಳಿ, ಶಿವು ಮನಗೂಳಿ, ಸಂತೋಷ ಕೊಂಚಿಕೊರವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>