ಬಜೆಟ್ಗೂ ಮೊದಲೇ ಕಾರಜೋಳ ಅವರು ನಿಯೋಗವನ್ನು ಒಯ್ದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದರು. ಈ ಯೋಜನೆ ಪೂರ್ಣಗೊಳಿಸಲು ₹56,000 ಕೋಟಿ ಅಗತ್ಯವಿದೆ. ಪ್ರತಿ ವರ್ಷ ₹15,000 ಕೋಟಿಯಷ್ಟು ಅನುದಾನ ನೀಡಿದರೆ, ಮೂರು ವರ್ಷಗಳಲ್ಲಿ ಬಹುತೇಕ ಕಾರ್ಯ ಮುಗಿಯುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿದ್ದರು. ಭರವಸೆ ಕೊಟ್ಟೂ ಹಣ ನಿಗದಿ ಆಗದಿರುವ ಬಗ್ಗೆ ಅವರಿಗೆ ಸಹಜವಾಗಿ ನಿರಾಸೆ ಆಗಿದೆ. ಇನ್ನೊಮ್ಮೆ ಶಾಸಕರ ನಿಯೋಗ ಕರೆದೊಯ್ಯುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.