ನವದೆಹಲಿ: ದೇಶದಆರ್ಥಿಕತೆಯ ಮೂಲವು ಸುಭದ್ರವಾಗಿದ್ದು, ಹಣದುಬ್ಬರವನ್ನು ಸಮರ್ಥವಾಗಿ ನಿಯಂತ್ರಣಕ್ಕೆ ತರಲಾಗಿದೆ. ಭಾರತವು ಈಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಸಂಸತ್ತಿನಲ್ಲಿ ಶನಿವಾರ ಬಜೆಟ್ 2020-21 ಮಂಡಿಸುತ್ತಾ ಅವರು, 2014-19ರ ವೇಳೆಗೆ ಹಣಕಾಸು ಆಡಳಿತದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದ್ದು, ಆರ್ಥಿಕ ಪ್ರಗತಿ ದರವು ಶೇ. 7.4 ದಾಟಿದೆ ಮತ್ತು ಹಣದುಬ್ಬರವನ್ನು ಸರಾಸರಿ ಶೇ. 4.5ಕ್ಕೆ ನಿಯಂತ್ರಿಸಲಾಗಿದೆ ಎಂದು ಹೇಳಿದರು.