‘ದೇಶಿ ಅಗರಬತ್ತಿ ಉದ್ಯಮವು ಕಳೆದ ಒಂದು ವರ್ಷಾವಧಿಯಲ್ಲಿ ನಿರೀಕ್ಷೆ ಮೀರಿ ಪ್ರಗತಿ ಕಂಡಿದೆ. ಉದ್ದಿಮೆಗೆ ನೀಡಿರುವ ತೆರಿಗೆ ರಿಯಾಯ್ತಿಯ ಕಾರಣಕ್ಕೆ ಹೊಸಬರು ವಹಿವಾಟು ಪ್ರವೇಶಿಸಿದ್ದಾರೆ. ‘ಗ್ರಾಹಕರು ಸುಗಂಧದ್ರವ್ಯದತ್ತ ಹೆಚ್ಚು ಒಲವು ತೋರುತಿದ್ದಾರೆ. ಹೊಸ ಉತ್ಪನ್ನಗಳಾದ ಅಕ್ವಾ, ಲ್ಯಾವೆಂಡರ್, ಔದ್ ಮತ್ತು ಅಗರಬತ್ತಿ ಕೂಡಾ ಇದರಲ್ಲಿ ಸೇರಿವೆ. ಪ್ರೀಮಿಯಂ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಧ್ಯಾತ್ಮ, ಧ್ಯಾನ ಸೇರಿದಂತೆ ವಿವಿಧ ಉದ್ದೇಶಗಳಿಗೆ ಅಗರಬತ್ತಿ ಬಳಕೆಯಾಗುತ್ತಿದೆ. ಧಾರ್ಮಿಕ ಆಚರಣೆಗಳು ಉದ್ಯಮಕ್ಕೆ ಉತ್ತೇಜನ ನೀಡುತ್ತಿವೆ. ಇತ್ತೀಚೆಗೆ ನಡೆದ ಕುಂಭಮೇಳವು ವಹಿವಾಟು ಹೆಚ್ಚಳಕ್ಕೆ ನೆರವಾಗಿದೆ.’ ಎಂದೂ ಹೇಳಿದ್ದಾರೆ.