<p><strong>ನವದೆಹಲಿ:</strong> ದೇಶದಲ್ಲಿ ಮೊದಲ ಬಾರಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ನಿಂದ (ಐಸಿಎಆರ್) ಜೀನೋಮ್ ಎಡಿಟಿಂಗ್ ಮೂಲಕ ಅಭಿವೃದ್ಧಿಪಡಿಸಿರುವ ಎರಡು ಹೊಸ ಭತ್ತದ ತಳಿಗಳನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಭಾನುವಾರ ಬಿಡುಗಡೆ ಮಾಡಿದ್ದಾರೆ.</p>.<p>ಬಳಿಕ ಮಾತನಾಡಿದ ಅವರು, ‘ಡಿಆರ್ಆರ್ ಧನ್ 100’ (ಕಮಲಾ) ಮತ್ತು ‘ಪೂಸಾ ಡಿಎಸ್ಟಿ ರೈಸ್ 1’ ಹೆಸರಿನ ಈ ತಳಿಗಳು ರೋಗ ನಿರೋಧಕ ಗುಣ ಹೊಂದಿದ್ದು, ಶೇ 30ರಷ್ಟು ಹೆಚ್ಚು ಇಳುವರಿ ನೀಡುತ್ತವೆ ಎಂದರು.</p>.<p>ಈ ತಳಿಗಳು ನೀರು ಸಂರಕ್ಷಣೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣ ತಗ್ಗಿಸುವಲ್ಲಿ ನೆರವಾಗಲಿವೆ. ಶೀಘ್ರವೇ, ದೇಶದ ರೈತರಿಗೆ ಈ ತಳಿಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.</p>.<p>ದೇಶದಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಸಾಂಬಾ ಮಹಸೂರಿ (ಬಿಪಿಟಿ5204) ಮತ್ತು ಕೊಟ್ಟೊಂಡೊರಾ ಸನ್ನಾಲು (ಎಂಟಿಯು1010) ಭತ್ತದ ತಳಿ ಬಳಸಿಕೊಂಡು ಈ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹವಾಮಾನ ಸಹಿಷ್ಣು ಮತ್ತು ಅತಿಹೆಚ್ಚು ಇಳುವರಿ ನೀಡುತ್ತವೆ. ಮೂಲ ಭತ್ತದ ವಂಶವಾಹಿ ಗುಣಗಳನ್ನು ಉಳಿಸಿಕೊಂಡೇ ಈ ತಳಿಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.</p>.<p>ಅತಿಹೆಚ್ಚು ಭತ್ತ ಬೆಳೆಯುವ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ, ಬಿಹಾರ, ಛತ್ತೀಸಗಢ, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದ ರೈತರಿಗೆ ಈ ತಳಿಗಳನ್ನು ನೀಡಲು ನಿರ್ಧರಿಸಲಾಗಿದೆ. </p>.<p>‘ಡಿಆರ್ಆರ್ ಧನ್ 100 ತಳಿಯ ಭತ್ತವು ಮೂಲ ಭತ್ತಕ್ಕಿಂತ 20 ದಿನಕ್ಕೂ ಮೊದಲೇ ಕಟಾವಿಗೆ ಬರುತ್ತದೆ. ಬೇಗ ಕೊಯ್ಲು ಮಾಡುವುದರಿಂದ ಬೆಳೆ ಮಾರ್ಪಾಡು ಮಾಡಿಕೊಳ್ಳಲು ಅಥವಾ ಬಹು ಬೆಳೆ ಬೆಳೆಯಲು ರೈತರಿಗೆ ನೆರವಾಗಲಿದೆ. ಈ ಭತ್ತವು ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವುದರಿಂದ ವರ್ಷದಲ್ಲಿ ಮೂರು ಫಸಲು ತೆಗೆಯಲು ನೆರವಾಗಲಿದೆ’ ಎಂದು ಚೌಹಾಣ್ ಹೇಳಿದರು. </p>.<p>ಈ ಎರಡು ಹೊಸ ತಳಿಗಳನ್ನು 50 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಮಾಡುವುದರಿಂದ ಹೆಚ್ಚುವರಿಯಾಗಿ 45 ಲಕ್ಷ ಟನ್ನಷ್ಟು ಭತ್ತದ ಉತ್ಪಾದನೆಯಾಗಲಿದೆ ಎಂದರು.</p>.<p>ಕೃಷಿ ಕ್ಷೇತ್ರದ ಅಭಿವೃದ್ಧಿಯಾಗದ ಹೊರತು ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯವಿಲ್ಲ. ಇದಕ್ಕಾಗಿ ನವೀನ ತಂತ್ರಜ್ಞಾನಗಳನ್ನು ಬಳಸಬೇಕಿದೆ. ಐಸಿಎಆರ್ ವಿಜ್ಞಾನಿಗಳು ವಿವಿಧ ತಳಿಯ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳನ್ನು ಅಭಿವೃದ್ಧಿಪಡಿಸುವ ಮೂಲಕ ಆಮದು ಪ್ರಮಾಣವನ್ನು ತಗ್ಗಿಸಬೇಕಿದೆ ಎಂದರು. </p>.<h2>ಜೀನೋಮ್ ಎಡಿಟಿಂಗ್ ಎಂದರೇನು?:</h2>.<p>ಜೀವಿಗಳ ಪ್ರತಿಯೊಂದು ಜೀವಕೋಶದಲ್ಲೂ ತಳಿಸೂತ್ರವಿದೆ. ಜೀವಕೋಶದ ಡಿಎನ್ಎಯನ್ನು ಕೃತಕವಾಗಿ ಬದಲಿಸುವ ವಿಧಾನಕ್ಕೆ ಜೀನೋಮ್ ಎಡಿಟಿಂಗ್ ಎಂದು ಕರೆಯಲಾಗುತ್ತದೆ.</p>.<p>ಜೀವಿಯೊಂದರ ವಂಶವಾಹಿಯನ್ನು ತೆಗೆದು ಅದನ್ನು ಮತ್ತೊಂದು ಜೀವಿಗೆ (ಪ್ರಾಣಿ ಅಥವಾ ಸಸ್ಯ ಅಥವಾ ಸೂಕ್ಷ್ಮಾಣು) ಸೇರಿಸಿ ಅದರ ದೈಹಿಕ ಗುಣಲಕ್ಷಣಗಳಲ್ಲಿ ಬದಲಾವಣೆ ತರಬಹುದಾಗಿದೆ. ಆ ಮೂಲಕ ನಿಸರ್ಗದಲ್ಲಿ ಕಾಣದಿದ್ದ ಹೊಸ ಜೀವಿ ಅಥವಾ ಸಸ್ಯಗಳ ತಳಿ ಸೃಷ್ಟಿಸಲು ಸಾಧ್ಯವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೇಶದಲ್ಲಿ ಮೊದಲ ಬಾರಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ನಿಂದ (ಐಸಿಎಆರ್) ಜೀನೋಮ್ ಎಡಿಟಿಂಗ್ ಮೂಲಕ ಅಭಿವೃದ್ಧಿಪಡಿಸಿರುವ ಎರಡು ಹೊಸ ಭತ್ತದ ತಳಿಗಳನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಭಾನುವಾರ ಬಿಡುಗಡೆ ಮಾಡಿದ್ದಾರೆ.</p>.<p>ಬಳಿಕ ಮಾತನಾಡಿದ ಅವರು, ‘ಡಿಆರ್ಆರ್ ಧನ್ 100’ (ಕಮಲಾ) ಮತ್ತು ‘ಪೂಸಾ ಡಿಎಸ್ಟಿ ರೈಸ್ 1’ ಹೆಸರಿನ ಈ ತಳಿಗಳು ರೋಗ ನಿರೋಧಕ ಗುಣ ಹೊಂದಿದ್ದು, ಶೇ 30ರಷ್ಟು ಹೆಚ್ಚು ಇಳುವರಿ ನೀಡುತ್ತವೆ ಎಂದರು.</p>.<p>ಈ ತಳಿಗಳು ನೀರು ಸಂರಕ್ಷಣೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣ ತಗ್ಗಿಸುವಲ್ಲಿ ನೆರವಾಗಲಿವೆ. ಶೀಘ್ರವೇ, ದೇಶದ ರೈತರಿಗೆ ಈ ತಳಿಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.</p>.<p>ದೇಶದಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಸಾಂಬಾ ಮಹಸೂರಿ (ಬಿಪಿಟಿ5204) ಮತ್ತು ಕೊಟ್ಟೊಂಡೊರಾ ಸನ್ನಾಲು (ಎಂಟಿಯು1010) ಭತ್ತದ ತಳಿ ಬಳಸಿಕೊಂಡು ಈ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹವಾಮಾನ ಸಹಿಷ್ಣು ಮತ್ತು ಅತಿಹೆಚ್ಚು ಇಳುವರಿ ನೀಡುತ್ತವೆ. ಮೂಲ ಭತ್ತದ ವಂಶವಾಹಿ ಗುಣಗಳನ್ನು ಉಳಿಸಿಕೊಂಡೇ ಈ ತಳಿಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.</p>.<p>ಅತಿಹೆಚ್ಚು ಭತ್ತ ಬೆಳೆಯುವ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ, ಬಿಹಾರ, ಛತ್ತೀಸಗಢ, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದ ರೈತರಿಗೆ ಈ ತಳಿಗಳನ್ನು ನೀಡಲು ನಿರ್ಧರಿಸಲಾಗಿದೆ. </p>.<p>‘ಡಿಆರ್ಆರ್ ಧನ್ 100 ತಳಿಯ ಭತ್ತವು ಮೂಲ ಭತ್ತಕ್ಕಿಂತ 20 ದಿನಕ್ಕೂ ಮೊದಲೇ ಕಟಾವಿಗೆ ಬರುತ್ತದೆ. ಬೇಗ ಕೊಯ್ಲು ಮಾಡುವುದರಿಂದ ಬೆಳೆ ಮಾರ್ಪಾಡು ಮಾಡಿಕೊಳ್ಳಲು ಅಥವಾ ಬಹು ಬೆಳೆ ಬೆಳೆಯಲು ರೈತರಿಗೆ ನೆರವಾಗಲಿದೆ. ಈ ಭತ್ತವು ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವುದರಿಂದ ವರ್ಷದಲ್ಲಿ ಮೂರು ಫಸಲು ತೆಗೆಯಲು ನೆರವಾಗಲಿದೆ’ ಎಂದು ಚೌಹಾಣ್ ಹೇಳಿದರು. </p>.<p>ಈ ಎರಡು ಹೊಸ ತಳಿಗಳನ್ನು 50 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಮಾಡುವುದರಿಂದ ಹೆಚ್ಚುವರಿಯಾಗಿ 45 ಲಕ್ಷ ಟನ್ನಷ್ಟು ಭತ್ತದ ಉತ್ಪಾದನೆಯಾಗಲಿದೆ ಎಂದರು.</p>.<p>ಕೃಷಿ ಕ್ಷೇತ್ರದ ಅಭಿವೃದ್ಧಿಯಾಗದ ಹೊರತು ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯವಿಲ್ಲ. ಇದಕ್ಕಾಗಿ ನವೀನ ತಂತ್ರಜ್ಞಾನಗಳನ್ನು ಬಳಸಬೇಕಿದೆ. ಐಸಿಎಆರ್ ವಿಜ್ಞಾನಿಗಳು ವಿವಿಧ ತಳಿಯ ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳನ್ನು ಅಭಿವೃದ್ಧಿಪಡಿಸುವ ಮೂಲಕ ಆಮದು ಪ್ರಮಾಣವನ್ನು ತಗ್ಗಿಸಬೇಕಿದೆ ಎಂದರು. </p>.<h2>ಜೀನೋಮ್ ಎಡಿಟಿಂಗ್ ಎಂದರೇನು?:</h2>.<p>ಜೀವಿಗಳ ಪ್ರತಿಯೊಂದು ಜೀವಕೋಶದಲ್ಲೂ ತಳಿಸೂತ್ರವಿದೆ. ಜೀವಕೋಶದ ಡಿಎನ್ಎಯನ್ನು ಕೃತಕವಾಗಿ ಬದಲಿಸುವ ವಿಧಾನಕ್ಕೆ ಜೀನೋಮ್ ಎಡಿಟಿಂಗ್ ಎಂದು ಕರೆಯಲಾಗುತ್ತದೆ.</p>.<p>ಜೀವಿಯೊಂದರ ವಂಶವಾಹಿಯನ್ನು ತೆಗೆದು ಅದನ್ನು ಮತ್ತೊಂದು ಜೀವಿಗೆ (ಪ್ರಾಣಿ ಅಥವಾ ಸಸ್ಯ ಅಥವಾ ಸೂಕ್ಷ್ಮಾಣು) ಸೇರಿಸಿ ಅದರ ದೈಹಿಕ ಗುಣಲಕ್ಷಣಗಳಲ್ಲಿ ಬದಲಾವಣೆ ತರಬಹುದಾಗಿದೆ. ಆ ಮೂಲಕ ನಿಸರ್ಗದಲ್ಲಿ ಕಾಣದಿದ್ದ ಹೊಸ ಜೀವಿ ಅಥವಾ ಸಸ್ಯಗಳ ತಳಿ ಸೃಷ್ಟಿಸಲು ಸಾಧ್ಯವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>