‘ಎಫ್ಕೆಸಿಸಿಐ’ ಈ ಬಗೆಯ ಸಮ್ಮೇಳನವನ್ನು ಇದೇ ಮೊದಲ ಬಾರಿಗೆ ಸಂಘಟಿಸುತ್ತಿದೆ. ಅರಬ್ ಅಮೀರರ ಒಕ್ಕೂಟದ (ಯುಎಇ) ಉದ್ಯಮಿ ಡಾ. ಬಿ. ಆರ್. ಶೆಟ್ಟಿ, ಆಸಿಯಾನ್ – ಭಾರತ ಉದ್ದಿಮೆ ಸಲಹಾ ಮಂಡಳಿಯ ಕಾರ್ಯದರ್ಶಿಯಾಗಿರುವ ಕ್ವಾಲಾಲಂಪುರದ ಡಿ. ರಮೇಶ್ ಕೊಡಮ್ಮಲ್, ಬ್ಯಾಂಕ್ ಆಫ್ ಬಹ್ರೇನ್ ಆ್ಯಂಡ್ ಕುವೈತ್ನ ಮುಖ್ಯಸ್ಥ ಎಸ್ವಿಆರ್ ಮೂರ್ತಿ ಮತ್ತಿತರ ದಿಗ್ಗಜರು ತಾವು ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.