ಕೋಲ್ಕತ್ತ : ದೇಶದ ಬ್ಯಾಂಕಿಂಗ್ ವಲಯದಲ್ಲಿ ಆಸ್ತಿ ಮತ್ತು ಹೊರೆಯ ನಡುವೆ ಭಾರಿ ಪ್ರಮಾಣದ ವ್ಯತ್ಯಾಸವಿದ್ದು, ಇದು ಯಾವುದೇ ಸಂದರ್ಭದಲ್ಲಿ ‘ಆಸ್ಫೋಟದ’ ಹಂತವನ್ನು ತಲುಪಬಹುದು ಎಂದು ಅರ್ಥಶಾಸ್ತ್ರಜ್ಞ ಪ್ರಣಬ್ ಸೇನ್ ಎಚ್ಚರಿಸಿದ್ದಾರೆ.
ದೇಶದ ಬಹುತೇಕ ಬ್ಯಾಂಕ್ಗಳು ಸರ್ಕಾರಿ ಸ್ವಾಮ್ಯದ್ದಾಗಿರುವ ಕಾರಣ ಈ ‘ಆಸ್ಫೋಟ’ ಸಂಭವಿಸಿಲ್ಲ ಎಂದಿದ್ದಾರೆ. ದೇಶದ ಬ್ಯಾಂಕ್ಗಳು ಬ್ರಿಟಿಷ್ ಮಾದರಿಯನ್ನು ಪಾಲಿಸುತ್ತಿವೆ. ಈ ಮಾದರಿಯು ಬ್ಯಾಂಕ್ಗಳಿಗೆ ಬಂಡವಾಳ ಮಾರುಕಟ್ಟೆಯಿಂದ ಹಣ ಪಡೆಯಲು ಅವಕಾಶ ನೀಡುವುದಿಲ್ಲ. ಹೀಗಾಗಿ, ಬ್ಯಾಂಕ್ಗಳಿಗೆ ಠೇವ ಣಿಯೇ ಹಣಕಾಸಿನ ಪ್ರಧಾನ ಮೂಲ.
‘ಇಂದು ಬ್ಯಾಂಕ್ಗಳು ನೀಡುವ ಸಾಲದ ಸರಾಸರಿ ಅವಧಿಯು 9 ವರ್ಷ. ಠೇವಣಿಗಳ ಸರಾಸರಿ ಅವಧಿಯು ಎರಡೂವರೆ ವರ್ಷ. ಅಂದರೆ, ಬ್ಯಾಂಕ್ನ ಆಸ್ತಿಯ ಅವಧಿಯ 9 ವರ್ಷ, ಹೊರೆಯ ಅವಧಿ ಎರಡೂವರೆ ವರ್ಷ. ಇದು ಸಮಸ್ಯೆ ಸೃಷ್ಟಿಸಬಹುದು’ ಎಂದು ಸಾಂಖ್ಯಿಕ ಆಯೋಗದ ಮಾಜಿ ಅಧ್ಯಕ್ಷ ಕೂಡ ಆಗಿರುವ ಸೇನ್ ಹೇಳಿದ್ದಾರೆ.
‘ಬ್ಯಾಂಕಿಂಗ್ ಕಾಯ್ದೆಗಳು ಬ್ಯಾಂಕ್ಗಳಿಗೆ ಬಂಡವಾಳ ಮಾರುಕಟ್ಟೆಯಿಂದ ಹಣ ಸಂಗ್ರಹಿಸಲು ಅವಕಾಶ ಕಲ್ಪಿಸುವಂತೆ ಇರಬೇಕು’ ಎಂದು ಅವರು ಹೇಳಿದ್ದಾರೆ.