<p><strong>ಮುಂಬೈ</strong>: ರಾಷ್ಟ್ರೀಯ ಷೇರುಪೇಟೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶನಿವಾರ ದೇಶದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮುಂಬೈ, ಗಾಂಧಿನಗರ, ದೆಹಲಿ, ನೊಯಿಡಾ, ಗುರುಗ್ರಾಮ ಮತ್ತು ಕೋಲ್ಕತ್ತಾ ಸೇರಿದಂತೆ ಹಲವು ನಗರಗಳಲ್ಲಿ ಶೋಧ ನಡೆಯುತ್ತಿದೆ.</p>.<p>ಈ ಪ್ರಕರಣದಲ್ಲಿ ಎನ್ಎಸ್ಇ ಮಾಜಿ ಸಿಇಒ ಮತ್ತು ಎಂಡಿ ಚಿತ್ರಾ ರಾಮಕೃಷ್ಣ ಹಾಗೂ ಸಿಒಒ ಆನಂದ್ ಸುಬ್ರಮಣಿಯನ್ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ ಈಗಾಗಲೇ ಚಾರ್ಜ್ಶೀಟ್ ಸಲ್ಲಿಸಿದೆ.</p>.<p>2010 ರಿಂದ 2015ರವರೆಗೆ ಚಿತ್ರಾ ರಾಮಕೃಷ್ಣ ಅವರು ಎನ್ಎಸ್ಇ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಕಾಲಾವಧಿಯ ತನಿಖೆ ಪೂರ್ಣಗೊಂಡಿದೆ. ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿರುವ ಆರೋಪಿಗಳ ಪೈಕಿ ಒಂದಾದ ಒಪಿಜಿ ಸೆಕ್ಯುರಿಟೀಸ್ ಸಂಸ್ಥೆಯು, ಎನ್ಎಸ್ಇಯ ಫ್ಯೂಚರ್ಸ್ ಮತ್ತು ಆಪ್ಷನ್ಸ್ ವಿಭಾಗಕ್ಕೆ 670 ದಿನಗಳ ಕಾಲ ದ್ವಿತೀಯ ಪಿಒಪಿ ಸರ್ವರ್ ಮೂಲಕ ಸಂಪರ್ಕ ಹೊಂದಿತ್ತು ಎಂಬುದು ಈವರೆಗಿನ ತನಿಖೆಯಲ್ಲಿ ದೃಢಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ರಾಷ್ಟ್ರೀಯ ಷೇರುಪೇಟೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶನಿವಾರ ದೇಶದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮುಂಬೈ, ಗಾಂಧಿನಗರ, ದೆಹಲಿ, ನೊಯಿಡಾ, ಗುರುಗ್ರಾಮ ಮತ್ತು ಕೋಲ್ಕತ್ತಾ ಸೇರಿದಂತೆ ಹಲವು ನಗರಗಳಲ್ಲಿ ಶೋಧ ನಡೆಯುತ್ತಿದೆ.</p>.<p>ಈ ಪ್ರಕರಣದಲ್ಲಿ ಎನ್ಎಸ್ಇ ಮಾಜಿ ಸಿಇಒ ಮತ್ತು ಎಂಡಿ ಚಿತ್ರಾ ರಾಮಕೃಷ್ಣ ಹಾಗೂ ಸಿಒಒ ಆನಂದ್ ಸುಬ್ರಮಣಿಯನ್ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ ಈಗಾಗಲೇ ಚಾರ್ಜ್ಶೀಟ್ ಸಲ್ಲಿಸಿದೆ.</p>.<p>2010 ರಿಂದ 2015ರವರೆಗೆ ಚಿತ್ರಾ ರಾಮಕೃಷ್ಣ ಅವರು ಎನ್ಎಸ್ಇ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಕಾಲಾವಧಿಯ ತನಿಖೆ ಪೂರ್ಣಗೊಂಡಿದೆ. ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿರುವ ಆರೋಪಿಗಳ ಪೈಕಿ ಒಂದಾದ ಒಪಿಜಿ ಸೆಕ್ಯುರಿಟೀಸ್ ಸಂಸ್ಥೆಯು, ಎನ್ಎಸ್ಇಯ ಫ್ಯೂಚರ್ಸ್ ಮತ್ತು ಆಪ್ಷನ್ಸ್ ವಿಭಾಗಕ್ಕೆ 670 ದಿನಗಳ ಕಾಲ ದ್ವಿತೀಯ ಪಿಒಪಿ ಸರ್ವರ್ ಮೂಲಕ ಸಂಪರ್ಕ ಹೊಂದಿತ್ತು ಎಂಬುದು ಈವರೆಗಿನ ತನಿಖೆಯಲ್ಲಿ ದೃಢಪಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>