ಈ ಜಲಮೂಲದ ರಕ್ಷಣೆಗೆ 12 ಕೆರೆ ವಾರ್ಡನ್ಗಳನ್ನು ನೇಮಿಸಲಾಗಿದೆ. ಇದರ ಕಾವಲಿಗೆ ನೇಮಿಸಿರುವ ಮಾರ್ಷಲ್ಗಳಿಗೆ ಅವರೂ ನೆರವಾಗಲಿದ್ದಾರೆ. ನಗರದ ಕಲುಷಿತ ನೀರನ್ನು ಸಂಸ್ಕರಿಸಿ ಕೋಲಾರದ ಖಾಲಿ ಕೆರೆಗಳಿಗೆ ತುಂಬಿಸುವ ನಿರ್ಧಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಶುದ್ಧೀಕರಿಸಿದ ನೀರನ್ನು ಬಳಸಿ ಮೊದಲು ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳನ್ನು ತುಂಬಿಸಬೇಕು. ಮಿಕ್ಕ ನೀರನ್ನಷ್ಟೇ ಕೋಲಾರಕ್ಕೆ ಸಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.