ಈಚೆಗೆ ಘೋಷಿಸಿರುವ ಆರ್ಥಿಕ ಪುನಶ್ಚೇತನ ಪ್ಯಾಕೇಜ್, ಬಂಡವಾಳ ವೆಚ್ಚಕ್ಕೆ ನೆರವಾಗುತ್ತದೆ ಎಂಬ ನಿರೀಕ್ಷೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆತ್ಮನಿರ್ಭರ ಭಾರತ ರೋಜಗಾರ್ ಯೋಜನೆಯು ಉದ್ಯೋಗ ನೀಡುವುದಕ್ಕೆ ಉತ್ತೇಜನ ಕೊಡುವುದರಿಂದಾಗಿ, ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿ ಆಗಬಹುದು. ನಗರಗಳಲ್ಲಿನ ಬಡವರಿಗೆ ಸಾಲ ಪಡೆಯಲು ನೆರವು ನೀಡುವ ಕ್ರಮ ಹಾಗೂ ಭಾರತ್ನೆಟ್ ಯೋಜನೆಯ ವಿಸ್ತರಣೆ ಕೂಡ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳಕ್ಕೆ ಸಹಾಯ ಮಾಡಬಹುದು ಎಂದು ವರದಿಯು ಅಂದಾಜು ಮಾಡಿದೆ.