<p><strong>ಭೋಪಾಲ್</strong>: ಭಾರತವು ಸೆಮಿಕಂಡಕ್ಟರ್ ಉತ್ಪಾದನಾ ವಲಯವನ್ನು ಪ್ರವೇಶಿಸಿದ್ದು ತಡವಾಗಿದೆಯಾದರೂ, ಅದು ಗಟ್ಟಿಯಾಗಿ ಅಲ್ಲಿ ಪಾದ ಊರಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.</p>.<p>ದೇಶವು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಲಿದೆ, ಮುಂದೆ ಅದನ್ನು ರಫ್ತು ಮಾಡುವ ಹಂತವನ್ನೂ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ಮಧ್ಯಪ್ರದೇಶದಲ್ಲಿ ನಡೆದ ಅಭ್ಯುದಯ ಮಧ್ಯಪ್ರದೇಶ ಅಭಿವೃದ್ಧಿ ಶೃಂಗದಲ್ಲಿ ಮಾತನಾಡಿದ ಅವರು ಈ ಮಾತು ಹೇಳಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಸ್ಮರಣಾರ್ಥ ₹2 ಲಕ್ಷ ಕೋಟಿ ಮೊತ್ತದ ಕೈಗಾರಿಕಾ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಸಿದ್ದಾರೆ.</p>.<p class="bodytext">‘ಡಿಜಿಟಲ್ ವಹಿವಾಟು ಹಾಗೂ ಫಿನ್ಟೆಕ್ ವಲಯಗಳಲ್ಲಿಯೂ ಭಾರತವು ಭಾರಿ ಮುನ್ನಡೆ ಸಾಧಿಸಿದೆ. 2024–25ರಲ್ಲಿ ಜಗತ್ತಿನ ಶೇಕಡ 46ರಷ್ಟು ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆದಿವೆ’ ಎಂದು ಶಾ ಮೆಚ್ಚುಗೆ ವ್ಯಕ್ತಪಡಿಸಿದರು.</p>
<p><strong>ಭೋಪಾಲ್</strong>: ಭಾರತವು ಸೆಮಿಕಂಡಕ್ಟರ್ ಉತ್ಪಾದನಾ ವಲಯವನ್ನು ಪ್ರವೇಶಿಸಿದ್ದು ತಡವಾಗಿದೆಯಾದರೂ, ಅದು ಗಟ್ಟಿಯಾಗಿ ಅಲ್ಲಿ ಪಾದ ಊರಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.</p>.<p>ದೇಶವು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಲಿದೆ, ಮುಂದೆ ಅದನ್ನು ರಫ್ತು ಮಾಡುವ ಹಂತವನ್ನೂ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ಮಧ್ಯಪ್ರದೇಶದಲ್ಲಿ ನಡೆದ ಅಭ್ಯುದಯ ಮಧ್ಯಪ್ರದೇಶ ಅಭಿವೃದ್ಧಿ ಶೃಂಗದಲ್ಲಿ ಮಾತನಾಡಿದ ಅವರು ಈ ಮಾತು ಹೇಳಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನದ ಸ್ಮರಣಾರ್ಥ ₹2 ಲಕ್ಷ ಕೋಟಿ ಮೊತ್ತದ ಕೈಗಾರಿಕಾ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಸಿದ್ದಾರೆ.</p>.<p class="bodytext">‘ಡಿಜಿಟಲ್ ವಹಿವಾಟು ಹಾಗೂ ಫಿನ್ಟೆಕ್ ವಲಯಗಳಲ್ಲಿಯೂ ಭಾರತವು ಭಾರಿ ಮುನ್ನಡೆ ಸಾಧಿಸಿದೆ. 2024–25ರಲ್ಲಿ ಜಗತ್ತಿನ ಶೇಕಡ 46ರಷ್ಟು ಡಿಜಿಟಲ್ ವಹಿವಾಟುಗಳು ಭಾರತದಲ್ಲಿ ನಡೆದಿವೆ’ ಎಂದು ಶಾ ಮೆಚ್ಚುಗೆ ವ್ಯಕ್ತಪಡಿಸಿದರು.</p>