ದಿನ ಭವಿಷ್ಯ: ಹಣಕಾಸು ಪರಿಸ್ಥಿತಿ ಸಂಪೂರ್ಣ ಹಿಡಿತದಲ್ಲಿಡಲು ಪ್ರಯತ್ನಿಸಿ
Published 10 ಫೆಬ್ರುವರಿ 2026, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಮಯ ಮತ್ತು ಅನುಕೂಲತೆಯ ಮೇಲೆ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವ ನಿರ್ಧಾರಕ್ಕೆ ಬನ್ನಿ. ಹಣಕಾಸು ಪರಿಸ್ಥಿತಿ ಸಂಪೂರ್ಣ ಹಿಡಿತದಲ್ಲಿಡಲು ಪ್ರಯತ್ನಿಸಿ. ಆಲಸ್ಯತನ ಕುಟುಂಬದ ಅಭಿವೃದ್ಧಿ ಹಾಳು ಮಾಡುತ್ತದೆ.
ವೃಷಭ
ವಿದ್ಯಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೆಲಸದಲ್ಲಿ ಉತ್ಸಾಹ ವೃದ್ಧಿ. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ಹಸನು. ಬಂಧು-ಮಿತ್ರರ ಒಡನಾಟದಿಂದ ಸಂತೋಷ ತೋರಿಬರಲಿದೆ.
ಮಿಥುನ
ಧನಾಗಮನಕ್ಕೆ ಹಲವು ದಾರಿಗಳು ಕಂಡರೂ, ಸರಿ ದಾರಿಯನ್ನು ಆರಿಸಿಕೊಳ್ಳಿ. ಕಚೇರಿಯಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿದ್ದು, ನೆಮ್ಮದಿ ಸಿಗಲಿದೆ.
ಕರ್ಕಾಟಕ
ಬಿಡುವಿಲ್ಲದ ಕೆಲಸಗಳು ಮತ್ತು ಮೇಲಧಿಕಾರಿಗಳ ಒತ್ತಡಗಳಿಂದ ವೈಯಕ್ತಿಕ ವಿಷಯಗಳತ್ತ ಗಮನ ಹರಿಸಲು ಸಮಯವಿಲ್ಲದಂತಾಗುವುದು. ಕೃಷಿ ಕಾರ್ಮಿಕರಿಗೆ ಕೆಲ ಕಾರಣದಿಂದ ಕೆಲಸದ ಒತ್ತಡ ಉಂಟಾಗುವುದು.
ಸಿಂಹ
ಭರವಸೆಯ ಮಾತುಗಳು ಸಹೋದ್ಯೋಗಿಯೊಬ್ಬರಿಗೆ ಆತ್ಮಸ್ಥೈರ್ಯ ತಂದುಕೊಡಲಿದೆ. ಗಮನಕ್ಕೆ ಬರುವ ತಪ್ಪುಗಳು ಪುನರಾವರ್ತನೆಯಾಗದಂತೆ ಗಮನಿಸಿ. ಹೊಸ ಕೆಲಸದ ಬಗ್ಗೆ ವಿಮರ್ಶಿಸಿ , ಕಾರ್ಯರೂಪಕ್ಕೆ ತನ್ನಿರಿ.
ಕನ್ಯಾ
ಹೊಣೆಗಾರಿಕೆಯನ್ನು ಹೊರಲು ಸಿದ್ಧರಾಗಿರುವಿರಿ ಮತ್ತು ಶಕ್ತರಾಗಿರುವಿರಿ. ಮನಸ್ಸು ಬೇಡದ ದಿಕ್ಕಿನಲ್ಲಿ ಹರಿಯುವುದನ್ನು ತಡೆಗಟ್ಟುವ ಬಗ್ಗೆ ಅಭ್ಯಾಸ ಮಾಡಿಕೊಳ್ಳಿ. ಪ್ರಮುಖ ಸ್ಥಾನ ಪಡೆಯಲು ತಯಾರಿ ನಡೆಸುವಿರಿ.
ತುಲಾ
ಮೊಬೈಲ್ ಫೋನ್ಗಳ ಮಾರಾಟಗಾರರಿಗೆ ಅಥವಾ ರಿಪೇರಿ ಮಾಡುವವರಿಗೆ ಆದಾಯ ಇರುವುದು. ಇಂದಿನ ಸಂಧಾನ ಅಥವಾ ಕರಾರು ಒಪ್ಪಂದಗಳು ಅನುಕೂಲಕರ ಎನಿಸಲಿವೆ. ಸದಾ ತಾಳ್ಮೆಯಿಂದ ವ್ಯವಹರಿಸಿ.
ವೃಶ್ಚಿಕ
ಬಂಧು ಮಿತ್ರರ ಸಹಾಯಗಳನ್ನು ಬಯಸದೆ ಕಾರ್ಯಗಳನ್ನು ಮಾಡಿಕೊಳ್ಳಲು ಅಭ್ಯಾಸ ಮಾಡಿ. ಬಾಕಿ ಉಳಿಸಿಕೊಂಡಿರುವ ಕೆಲಸಗಳನ್ನು ಬೇಗ ಮುಗಿಸಿಕೊಳ್ಳುವಂಥ ಪ್ರಯತ್ನಗಳು ನಡೆಯಲಿವೆ.
ಧನು
ದೈವಾನುಕೂಲದಿಂದ ನಡೆಯಬೇಕಾದ ಶುಭ ಕಾರ್ಯಗಳನ್ನು ಹಿರಿಯರೊಂದಿಗೆ ಕುಳಿತು ನಿಶ್ಚಯ ಮಾಡಬಹುದು. ನೌಕರಿಯಲ್ಲಿ ಬಡ್ತಿ ಹೊಂದುವ ಬಗ್ಗೆ ಪ್ರಯತ್ನ ಇರಲಿ. ಪ್ರಯತ್ನಗಳು ನಿಷ್ಫಲವೆನಿಸುವುದಿಲ್ಲ.
ಮಕರ
ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ. ಇತರರೆಲ್ಲರಿಗಿಂತ ಭಿನ್ನ ಹಾಗೂ ಧನಾತ್ಮಕ ನಿರ್ಧಾರಗಳನ್ನು ತಗೆದುಕೊಳ್ಳುವಿರಿ.
ಕುಂಭ
ದುರಾಲೋಚನೆಗಳನ್ನು ಬದಲಿಸಿಕೊಳ್ಳುವ ಸಮಯವಾಗಿದೆ. ಅನುಯಾಯಿಗಳಿಗೆ ನೀವಾಡುವ ಮಾತುಗಳಿಂದ ಬಹಳ ಸಂತಸ ಉಂಟಾಗುವುದು. ನಿಶ್ಚಿತ ರೂಪದಲ್ಲಿ ಕೆಲಸಗಳು ಜರುಗಲಿವೆ.
ಮೀನ
ಕೋರ್ಟ್ ವ್ಯವಹಾರಗಳು ಬಗೆಹರಿಯಬಹುದೆಂಬ ಆಲೋಚನೆ ದುರ್ಬುದ್ಧಿಯಿಂದ ವ್ಯತ್ಯಾಸಗಳಾಗುತ್ತದೆ. ಹೆಂಡತಿಯ ಆರೋಗ್ಯ ಸುಧಾರಿಸುತ್ತದೆ. ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುವುದು.