<p>ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕಲಾವಿದರು ಸದ್ಯ ಸಕಲೇಶಪುರದಲ್ಲಿ ಬೀಡುಬಿಟ್ಟಿದ್ದಾರೆ. ಇದೇ ಫೋಟೊಗಳನ್ನು ನಟ ಹರೀಶ್ ರಾಜ್ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಭಾಗ್ಯಲಕ್ಷ್ಮೀ ತಂಡದ ಜೊತೆ ಸಕಲೇಶಪುರದಲ್ಲಿ’ ಎಂದು ಅಡಿಬರಹ ಹಾಕಿದ್ದಾರೆ.</p>.<p>ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಸುಷ್ಮಾ ಕೆ. ರಾವ್, ಹರೀಶ್ ರಾಜ್, ಸುದರ್ಶನ್ ರಂಗಪ್ರಸಾದ್ ಮುಂತಾದವರು ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಭಾಗ್ಯ ಗೊಂದಲದಲ್ಲಿದ್ದಾಳೆ. </p><p>ಒಂದು ಕಡೆ ತಾಂಡವ್ ಮತ್ತೊಂದು ಕಡೆ ಆದಿ. ಈ ಇಬ್ಬರಲ್ಲಿ ಯಾರನ್ನು ಒಪ್ಪಿಕೊಳ್ಳಬೇಕೆಂದು ಒದ್ದಾಡುತ್ತಿದ್ದಾಳೆ. ಹೀಗಿರುವಾಗಲೇ, ಇಡೀ ಧಾರಾವಾಹಿ ತಂಡ ಸಕಲೇಶಪುರಕ್ಕೆ ಹೋಗಿದೆ. ಆದರೆ ಮುಂದಿನ ಸಂಚಿಕೆಯಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿಯ ತಿರುವು ಪಡೆದುಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.</p>.<p>ನಟ ಹರೀಶ್ ರಾಜ್, ರಾಜೇಶ್ ಧ್ರುವ, ತನ್ವಿ ಪಾತ್ರಧಾರಿ ಅಮೃತಾ, ತನ್ಮಯ್ ಪಾತ್ರಧಾರಿ ನಿಹಾರ್ ಗೌಡ ಮುಂತಾದ ಕಲಾವಿದರು ಸಕಲೇಶಪುರದ ನಿಸರ್ಗ ಸಿರಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದೇ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕಲಾವಿದರು ಸದ್ಯ ಸಕಲೇಶಪುರದಲ್ಲಿ ಬೀಡುಬಿಟ್ಟಿದ್ದಾರೆ. ಇದೇ ಫೋಟೊಗಳನ್ನು ನಟ ಹರೀಶ್ ರಾಜ್ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಭಾಗ್ಯಲಕ್ಷ್ಮೀ ತಂಡದ ಜೊತೆ ಸಕಲೇಶಪುರದಲ್ಲಿ’ ಎಂದು ಅಡಿಬರಹ ಹಾಕಿದ್ದಾರೆ.</p>.<p>ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಸುಷ್ಮಾ ಕೆ. ರಾವ್, ಹರೀಶ್ ರಾಜ್, ಸುದರ್ಶನ್ ರಂಗಪ್ರಸಾದ್ ಮುಂತಾದವರು ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಭಾಗ್ಯ ಗೊಂದಲದಲ್ಲಿದ್ದಾಳೆ. </p><p>ಒಂದು ಕಡೆ ತಾಂಡವ್ ಮತ್ತೊಂದು ಕಡೆ ಆದಿ. ಈ ಇಬ್ಬರಲ್ಲಿ ಯಾರನ್ನು ಒಪ್ಪಿಕೊಳ್ಳಬೇಕೆಂದು ಒದ್ದಾಡುತ್ತಿದ್ದಾಳೆ. ಹೀಗಿರುವಾಗಲೇ, ಇಡೀ ಧಾರಾವಾಹಿ ತಂಡ ಸಕಲೇಶಪುರಕ್ಕೆ ಹೋಗಿದೆ. ಆದರೆ ಮುಂದಿನ ಸಂಚಿಕೆಯಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿಯ ತಿರುವು ಪಡೆದುಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.</p>.<p>ನಟ ಹರೀಶ್ ರಾಜ್, ರಾಜೇಶ್ ಧ್ರುವ, ತನ್ವಿ ಪಾತ್ರಧಾರಿ ಅಮೃತಾ, ತನ್ಮಯ್ ಪಾತ್ರಧಾರಿ ನಿಹಾರ್ ಗೌಡ ಮುಂತಾದ ಕಲಾವಿದರು ಸಕಲೇಶಪುರದ ನಿಸರ್ಗ ಸಿರಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದೇ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>