‘ಭಾರತ–ಚೀನಾ ಗಡಿ ಸಂಘರ್ಷದಿಂದಾಗಿ ಭಾರತದಲ್ಲಿ ಚೀನಾದ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನ ಆರಂಭವಾಗಿದೆ. ಇದರಿಂದ ಭಾರತದ ಬ್ರ್ಯಾಂಡ್ಗಳ ಭವಿಷ್ಯವೇನೂ ಬದಲಾಗುವುದಿಲ್ಲ. ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ, ಕಡಿಮೆ ಬಡ್ಡಿದರಕ್ಕೆ ಸಾಲ ಸಿಗುವಂತೆ ಮಾಡಿದರೆ ಮಾತ್ರ ದೇಶಿ ಬ್ರ್ಯಾಂಡ್ಗಳು ಕಡಿಮೆ ಬೆಲೆಗೆ ಸರಕುಗಳನ್ನು ನೀಡಲು ಸಾಧ್ಯವಾಗಲಿದೆ’ ಎಂದು ಕಾರ್ಬನ್ ಬ್ರ್ಯಾಂಡ್ ಹೊಂದಿರುವ ಜೈನಾ ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕ ಅಭಿಷೇಕ್ ಗರ್ಗ್ ಹೇಳಿದ್ದಾರೆ.