‘ಅನಾಮಧೇಯರಿಂದ ಎರಡು ದೂರುಗಳು ಸಲ್ಲಿಕೆಯಾಗುತ್ತಿದ್ದಂತಯೇ ಲೆಕ್ಕಪತ್ರ ಸಮಿತಿ ಮತ್ತು ಕಾರ್ಯನಿರ್ವಾಹಕಯೇತರ ಸದಸ್ಯರ ಮುಂದೆ ಅವುಗಳನ್ನು ಮಂಡಿಸಲಾಗಿದೆ. ಸಮಿತಿಯು ಸ್ವತಂತ್ರ ಆಂತರಿಕ ಲೆಕ್ಕಪತ್ರ ತಪಾಸಣಾ ಸಂಸ್ಥೆ ಅರ್ನೆಸ್ಟ್ ಆ್ಯಂಡ್ ಯಂಗ್ (ಇವೈ) ಮತ್ತು ಕಾನೂನು ಸಂಸ್ಥೆ ಶಾರ್ದೂಲ್ ಅಮರ್ಚಂದ್ ಮಂಗಲದಾಸ್ ಆ್ಯಂಡ್ ಕಂಪನಿ ಜತೆ ಚರ್ಚೆ ಆರಂಭಿಸಿದೆ’ ಎಂದು ನಿಲೇಕಣಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.