ದಿಗ್ಬಂಧನ ವಿಸ್ತರಣೆಯಾಗಿದ್ದರಿಂದ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್ಡಿಎಐ) ಈ ನಿರ್ಧಾರ ಕೈಗೊಂಡಿದೆ. ಇದರಿಂದ ಪಾಲಿಸಿದಾರರಿಗೆ ನೆಮ್ಮದಿ ಸಿಗಲಿದೆ. ವಿಮೆ ಪರಿಹಾರ ಸೌಲಭ್ಯ ಜಾರಿಯಲ್ಲಿ ಇರಲು ಈ ಗಡುವಿನ ಒಳಗೆ ಪಾಲಿಸಿದಾರರು ಪಾವತಿಸಬೇಕಾಗಿದ್ದ ಎಲ್ಲ ಕಂತುಗಳನ್ನು ಪಾವತಿಸಬೇಕಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.