ಹಣಕಾಸಿನ ಬಿಕ್ಕಟ್ಟಿನ ಕಾರಣದಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಈ ಕಂಪನಿಯನ್ನು ಈಗ ಮುರಾರಿಲಾಲ್ ಜಲನ್ ಮತ್ತು ಕಲ್ರಾಕ್ ಕ್ಯಾಪಿಟಲ್ ಒಕ್ಕೂಟವು ಖರೀದಿಸಿದೆ.ಈಗ ನಡೆದಿರುವ ಮಾತುಕತೆಗಳು ಕಂಪನಿಯ ಪುನಶ್ಚೇತನಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್ಸಿಎಲ್ಟಿ) ಮುಂಬೈ ಪೀಠ ಅನುಮೋದನೆ ನೀಡಿರುವ ಕಾರ್ಯಯೋಜನೆಯ ಭಾಗ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.