ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಕ್ಯಾಪಿಟಲ್‌ ದಿವಾಳಿ ಪ್ರಕ್ರಿಯೆ: ಗಡುವು ಮತ್ತೆ ವಿಸ್ತರಣೆ

Last Updated 26 ಜೂನ್ 2022, 19:50 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್ ಕ್ಯಾಪಿಟಲ್‌ ಲಿಮಿಟೆಡ್‌ನ (ಆರ್‌ಸಿಎಲ್‌) ದಿವಾಳಿ ಪ್ರಕ್ರಿಯೆ ಪೂರ್ಣಗೊಳಿಸುವ ಕಾಲಮಿತಿಯನ್ನು ಮತ್ತೆ ಎರಡು ತಿಂಗಳವರೆಗೆ ವಿಸ್ತರಿಸಲು ಸಾಲಗಾರರ ಸಮಿತಿಯು (ಸಿಒಸಿ) ನಿರ್ಧರಿಸಿದೆ.

ದಿವಾಳಿ ಪ್ರಕ್ರಿಯೆಯನ್ನು ಎರಡನೇ ಬಾರಿಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜೂನ್‌ 3ಕ್ಕೆ ಇದ್ದ ಕಾಲಮಿತಿಯನ್ನು ಸೆಪ್ಟೆಂಬರ್ 2ರವರೆಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಎರಡನೇ ಬಾರಿಗೆ ಅಂದರೆ ನವೆಂಬರ್‌ 2ರವರೆಗೆ ವಿಸ್ತರಣೆ ಮಾಡಲಾಗಿದೆ.

ಅರ್ಹ ಬಿಡ್‌ದಾರರು ಹೆಚ್ಚಿನ ಕಾಲಾವಧಿ ನೀಡುವಂತೆ ಆಡಳಿತಾಧಿಕಾರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದಿವಾಳಿ ಸಂಹಿತೆಯ (ಐಬಿಸಿ) ನಿಯಮದ ಪ್ರಕಾರ, ಆಡಳಿತಾಧಿಕಾರಿಯು ಕಂಪನಿಯ ದಿವಾಳಿ ಪ್ರಕ್ರಿಯೆಯನ್ನು 180 ದಿನಗಳ ಒಳಗಾಗಿ ಅಂದರೆ ಜೂನ್‌ 3ರ ಒಳಗಾಗಿ ಪೂರ್ಣಗೊಳಿಸಬೇಕು.

ಅರ್ಹ ಬಿಡ್‌ದಾರರಿಗೆ ಪುನಶ್ಚೇತನ ಯೋಜನೆಯನ್ನು ಸಲ್ಲಿಸಲು ನೀಡಿದ್ದ ಗಡುವನ್ನು ಜೂನ್‌ 20 ರಿಂದ ಜುಲೈ 11ರವರೆಗೆ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT