<p><strong>ನವದೆಹಲಿ: </strong>ದೇಶದ ಗಣ್ಯ ರಾಜಕಾರಣಿಗಳು, ಕೇಂದ್ರ ಸಚಿವರು ವಾಸಿಸುವ ನಗರದ ಪ್ರತಿಷ್ಠಿತ ಅಕ್ಬರ್ ರಸ್ತೆ ನಾಮಫಲಕದ ಮೇಲೆ ಕಿಡಿಗೇಡಿಗಳು ‘ಮಹಾರಾಣಾ ಪ್ರತಾಪ್ ಮಾರ್ಗ’ ಎಂದು ಬರೆದ ಹಾಳೆಯನ್ನು ಅಂಟಿಸಿದ್ದಾರೆ.</p>.<p>ಇದಾದ ಕೆಲವು ಗಂಟೆಗಳಲ್ಲಿ, ಗಸ್ತಿನಲ್ಲಿದ್ದ ಪೊಲೀಸರು ಈ ಹಾಳೆಯನ್ನು ಕಿತ್ತೆಸೆದಿದ್ದಾರೆ. ಈ ಸಂಬಂಧ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಇದುವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ.</p>.<p>ಮೊಘಲ್ ದೊರೆ ಅಕ್ಬರ್ ವಿರುದ್ಧ ಸೆಣಸಿದ ರಾಜಸ್ಥಾನದ ಮೇವಾಡ ರಾಜ ಮಹಾರಾಣಾ ಪ್ರತಾಪ್ ಸಿಂಗ್ ಜಯಂತಿ ದಿನವಾದ ಬುಧವಾರ ಇದು ಕಾಣಿಸಿಕೊಂಡಿದೆ. ಮಂಗಳವಾರ ರಾತ್ರಿ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.</p>.<p>ಇಂತಹ ಕೃತ್ಯ ಹೊಸದೇನಲ್ಲ. 2016ರಲ್ಲಿ ಮೊದಲ ಬಾರಿಗೆ ಇಂತಹ ಘಟನೆ ನಡೆದಿತ್ತು. ಹಿಂದೂ ಸೇನಾ ಎಂಬ ಬಲಪಂಥೀಯ ಸಂಘಟನೆ ಅದರ ಹೊಣೆ ಹೊತ್ತಿತ್ತು.</p>.<p>ರಸ್ತೆಗಳ ಮರು ನಾಮಕರಣ ಹೊಸದಲ್ಲ: 2015ರಲ್ಲಿ ಔರಂಗಜೇಬ್ ಮಾರ್ಗದ ಹೆಸರನ್ನು ‘ಡಾ. ಅಬ್ದುಲ್ ಕಲಾಂ ಮಾರ್ಗ’ ಎಂದು ನವದೆಹಲಿ ಮಹಾನಗರಪಾಲಿಕೆ ಬದಲಿಸಿತ್ತು.</p>.<p>ಅದೇ ವರ್ಷ, ಅಕ್ಬರ್ ರಸ್ತೆ ಅಥವಾ ಸಂಸತ್ ಬಳಿ ಇರುವ ಬೇರೆ ಯಾವುದೇ ರಸ್ತೆಗೆ ‘ಮಹಾರಾಣಾ ಪ್ರತಾಪ್ ಮಾರ್ಗ’ ಎಂದು ಮರುನಾಮಕರಣ ಮಾಡುವಂತೆ ಭೂಸೇನೆಯ ನಿವೃತ್ತ ಮುಖ್ಯಸ್ಥ ಹಾಗೂ ಬಿಜೆಪಿ ನಾಯಕ ವಿ.ಕೆ. ಸಿಂಗ್ ಅವರು ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದ್ದರು.</p>.<p>ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತದೆಯೇ ಹೊರತು ರಸ್ತೆಗಳಿಗೆ ಮರು ನಾಮಕರಣ ಮಾಡುವುದಕ್ಕಲ್ಲ ಎಂದು ಅಂದು ನಗರಾಭಿವೃದ್ಧಿ ಸಚಿವರಾಗಿದ್ದ ಎಂ.ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿ<br /> ದ್ದರು.</p>.<p>ಅದರ ಮರುವರ್ಷದಲ್ಲಿಯೇ ಪ್ರಧಾನಿ ನಿವಾಸವಿದ್ದ ರೇಸ್ಕೋರ್ಸ್ ರಸ್ತೆಗೆ ಲೋಕಕಲ್ಯಾಣ ಮಾರ್ಗ ಎಂದು ಮರು ನಾಮಕರಣ ಮಾಡಲಾಗಿತ್ತು.</p>.<p>‘ನಮ್ಮ ಮೇಲೆ ಆಕ್ರಮಣ ನಡೆಸಿದ ಮೊಘಲ್ ದೊರೆಯ ಹೆಸರು ದಾಸ್ಯದ ಸಂಕೇತ. ಬಿಜೆಪಿ ಸರ್ಕಾರ ಈಗಲಾದರೂ ಈ ರಸ್ತೆಗೆ ರಾಣಾ ಪ್ರತಾಪ್ ಸಿಂಗ್ ಹೆಸರು ಇಡುತ್ತದೆ ಎಂಬ ಭರವಸೆ ಇದೆ’ ಎಂದು ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಕಳೆದ ವರ್ಷ ತಮ್ಮ ಕೃತ್ಯ ಸಮರ್ಥಿಸಿಕೊಂಡಿದ್ದರು.</p>.<p><strong>ಹೆಸರು ಬದಲಿಸುವ ಪ್ರಸ್ತಾಪ ಇಲ್ಲ</strong><br /> ‘ಅಕ್ಬರ್ ರಸ್ತೆಯ ಹೆಸರು ಬದಲಿಸುವ ಉದ್ದೇಶ ಅಥವಾ ಪ್ರಸ್ತಾಪ ಪಾಲಿಕೆ ಮುಂದಿಲ್ಲ. ಕಿಡಿಗೇಡಿಗಳ ಈ ಕೃತ್ಯ ಕಾನೂನು, ಸುವ್ಯವಸ್ಥೆಗೆ ಸಂಬಂಧಿಸಿದ್ದು, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ’ ಎಂದು ನವದೆಹಲಿ ಮಹಾನಗರಪಾಲಿಕೆ (ಎನ್ಡಿಎಂಸಿ) ಸ್ಪಷ್ಟಪಡಿಸಿದೆ.</p>.<p>ಗಸ್ತು ಪೊಲೀಸರು ನಾಮಫಲಕದ ಮೇಲೆ ಅಂಟಿಸಿದ್ದ ಹಾಳೆ ಕಿತ್ತು ಎಸೆದಿದ್ದಾರೆ. ಎನ್ಡಿಎಂಸಿ ದೂರು ಸಲ್ಲಿಸಿದರೆ ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.</p>.<p>ಸಂಸತ್ ಭವನದ ಸಮೀಪದಲ್ಲಿರುವ ಅಕ್ಬರ್ ರಸ್ತೆಯಲ್ಲಿ ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಿವಾಸಗಳಿವೆ. ಕಾಂಗ್ರೆಸ್ ಪ್ರಧಾನ ಕಚೇರಿ ಕೂಡ ಇಲ್ಲಿಯೇ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ದೇಶದ ಗಣ್ಯ ರಾಜಕಾರಣಿಗಳು, ಕೇಂದ್ರ ಸಚಿವರು ವಾಸಿಸುವ ನಗರದ ಪ್ರತಿಷ್ಠಿತ ಅಕ್ಬರ್ ರಸ್ತೆ ನಾಮಫಲಕದ ಮೇಲೆ ಕಿಡಿಗೇಡಿಗಳು ‘ಮಹಾರಾಣಾ ಪ್ರತಾಪ್ ಮಾರ್ಗ’ ಎಂದು ಬರೆದ ಹಾಳೆಯನ್ನು ಅಂಟಿಸಿದ್ದಾರೆ.</p>.<p>ಇದಾದ ಕೆಲವು ಗಂಟೆಗಳಲ್ಲಿ, ಗಸ್ತಿನಲ್ಲಿದ್ದ ಪೊಲೀಸರು ಈ ಹಾಳೆಯನ್ನು ಕಿತ್ತೆಸೆದಿದ್ದಾರೆ. ಈ ಸಂಬಂಧ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಇದುವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ.</p>.<p>ಮೊಘಲ್ ದೊರೆ ಅಕ್ಬರ್ ವಿರುದ್ಧ ಸೆಣಸಿದ ರಾಜಸ್ಥಾನದ ಮೇವಾಡ ರಾಜ ಮಹಾರಾಣಾ ಪ್ರತಾಪ್ ಸಿಂಗ್ ಜಯಂತಿ ದಿನವಾದ ಬುಧವಾರ ಇದು ಕಾಣಿಸಿಕೊಂಡಿದೆ. ಮಂಗಳವಾರ ರಾತ್ರಿ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.</p>.<p>ಇಂತಹ ಕೃತ್ಯ ಹೊಸದೇನಲ್ಲ. 2016ರಲ್ಲಿ ಮೊದಲ ಬಾರಿಗೆ ಇಂತಹ ಘಟನೆ ನಡೆದಿತ್ತು. ಹಿಂದೂ ಸೇನಾ ಎಂಬ ಬಲಪಂಥೀಯ ಸಂಘಟನೆ ಅದರ ಹೊಣೆ ಹೊತ್ತಿತ್ತು.</p>.<p>ರಸ್ತೆಗಳ ಮರು ನಾಮಕರಣ ಹೊಸದಲ್ಲ: 2015ರಲ್ಲಿ ಔರಂಗಜೇಬ್ ಮಾರ್ಗದ ಹೆಸರನ್ನು ‘ಡಾ. ಅಬ್ದುಲ್ ಕಲಾಂ ಮಾರ್ಗ’ ಎಂದು ನವದೆಹಲಿ ಮಹಾನಗರಪಾಲಿಕೆ ಬದಲಿಸಿತ್ತು.</p>.<p>ಅದೇ ವರ್ಷ, ಅಕ್ಬರ್ ರಸ್ತೆ ಅಥವಾ ಸಂಸತ್ ಬಳಿ ಇರುವ ಬೇರೆ ಯಾವುದೇ ರಸ್ತೆಗೆ ‘ಮಹಾರಾಣಾ ಪ್ರತಾಪ್ ಮಾರ್ಗ’ ಎಂದು ಮರುನಾಮಕರಣ ಮಾಡುವಂತೆ ಭೂಸೇನೆಯ ನಿವೃತ್ತ ಮುಖ್ಯಸ್ಥ ಹಾಗೂ ಬಿಜೆಪಿ ನಾಯಕ ವಿ.ಕೆ. ಸಿಂಗ್ ಅವರು ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದ್ದರು.</p>.<p>ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತದೆಯೇ ಹೊರತು ರಸ್ತೆಗಳಿಗೆ ಮರು ನಾಮಕರಣ ಮಾಡುವುದಕ್ಕಲ್ಲ ಎಂದು ಅಂದು ನಗರಾಭಿವೃದ್ಧಿ ಸಚಿವರಾಗಿದ್ದ ಎಂ.ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿ<br /> ದ್ದರು.</p>.<p>ಅದರ ಮರುವರ್ಷದಲ್ಲಿಯೇ ಪ್ರಧಾನಿ ನಿವಾಸವಿದ್ದ ರೇಸ್ಕೋರ್ಸ್ ರಸ್ತೆಗೆ ಲೋಕಕಲ್ಯಾಣ ಮಾರ್ಗ ಎಂದು ಮರು ನಾಮಕರಣ ಮಾಡಲಾಗಿತ್ತು.</p>.<p>‘ನಮ್ಮ ಮೇಲೆ ಆಕ್ರಮಣ ನಡೆಸಿದ ಮೊಘಲ್ ದೊರೆಯ ಹೆಸರು ದಾಸ್ಯದ ಸಂಕೇತ. ಬಿಜೆಪಿ ಸರ್ಕಾರ ಈಗಲಾದರೂ ಈ ರಸ್ತೆಗೆ ರಾಣಾ ಪ್ರತಾಪ್ ಸಿಂಗ್ ಹೆಸರು ಇಡುತ್ತದೆ ಎಂಬ ಭರವಸೆ ಇದೆ’ ಎಂದು ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಕಳೆದ ವರ್ಷ ತಮ್ಮ ಕೃತ್ಯ ಸಮರ್ಥಿಸಿಕೊಂಡಿದ್ದರು.</p>.<p><strong>ಹೆಸರು ಬದಲಿಸುವ ಪ್ರಸ್ತಾಪ ಇಲ್ಲ</strong><br /> ‘ಅಕ್ಬರ್ ರಸ್ತೆಯ ಹೆಸರು ಬದಲಿಸುವ ಉದ್ದೇಶ ಅಥವಾ ಪ್ರಸ್ತಾಪ ಪಾಲಿಕೆ ಮುಂದಿಲ್ಲ. ಕಿಡಿಗೇಡಿಗಳ ಈ ಕೃತ್ಯ ಕಾನೂನು, ಸುವ್ಯವಸ್ಥೆಗೆ ಸಂಬಂಧಿಸಿದ್ದು, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ’ ಎಂದು ನವದೆಹಲಿ ಮಹಾನಗರಪಾಲಿಕೆ (ಎನ್ಡಿಎಂಸಿ) ಸ್ಪಷ್ಟಪಡಿಸಿದೆ.</p>.<p>ಗಸ್ತು ಪೊಲೀಸರು ನಾಮಫಲಕದ ಮೇಲೆ ಅಂಟಿಸಿದ್ದ ಹಾಳೆ ಕಿತ್ತು ಎಸೆದಿದ್ದಾರೆ. ಎನ್ಡಿಎಂಸಿ ದೂರು ಸಲ್ಲಿಸಿದರೆ ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.</p>.<p>ಸಂಸತ್ ಭವನದ ಸಮೀಪದಲ್ಲಿರುವ ಅಕ್ಬರ್ ರಸ್ತೆಯಲ್ಲಿ ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಿವಾಸಗಳಿವೆ. ಕಾಂಗ್ರೆಸ್ ಪ್ರಧಾನ ಕಚೇರಿ ಕೂಡ ಇಲ್ಲಿಯೇ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>