ಆದರೆ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸಗಡ, ಜಾರ್ಖಂಡ್ ರಾಜ್ಯಗಳು ಈ ಪ್ರಸ್ತಾವಕ್ಕೆ ಇನ್ನೂ ಒಪ್ಪಿಗೆ ಸೂಚಿಸಿಲ್ಲ. ‘ಕೇಂದ್ರವು ₹ 1.83 ಲಕ್ಷ ಕೋಟಿಯನ್ನು ಸಾಲ ಪಡೆದು ರಾಜ್ಯಗಳಿಗೆ ನೀಡಬೇಕು. ತೆರಿಗೆ ಸಂಗ್ರಹದಲ್ಲಿ ಆಗಿರುವ ಕೊರತೆಯನ್ನು ಕೋವಿಡ್–19ರಿಂದ ಆಗಿದ್ದು ಹಾಗೂ ಜಿಎಸ್ಟಿ ವ್ಯವಸ್ಥೆಯಿಂದಾಗಿ ಆಗಿದ್ದು ಎಂದು ವರ್ಗೀಕರಿಸುವುದು ಅಸಾಂವಿಧಾನಿಕ’ ಎಂದು ಈ ರಾಜ್ಯಗಳು ಹೇಳುತ್ತಿವೆ.