ನವದೆಹಲಿ: ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್.ಎಫ್.ನರಿಮನ್ ಹೇಳಿದ್ದಾರೆ.
‘ನಮ್ಮಲ್ಲೊಬ್ಬರು (ನ್ಯಾ.ಆರ್.ಎಫ್.ನರಿಮನ್) ಸದಸ್ಯರಾಗಿಲ್ಲದ ಪೀಠಕ್ಕೆ ಈ ಅರ್ಜಿ ಸಲ್ಲಿಸಿ’ ಎಂದು ನರಿಮನ್ ಹಾಗೂ ಎಸ್.ರವೀಂದ್ರ ಭಟ್ ಅವರನ್ನು ಒಳಗೊಂಡ ನ್ಯಾಯಪೀಠ ಆದೇಶಿಸಿತು.
ಬ್ಯಾಂಕ್ಗಳ ಸಮೂಹಕ್ಕೆ ಮಲ್ಯ ₹ 3,101 ಕೋಟಿ ಸಾಲ ಮರುಪಾವತಿಸಬೇಕೆಂದು ನಿರ್ದೇಶಿಸಿ ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು.