ಕಾಗದ ಕಾರ್ಖಾನೆಗೆ ಗುತ್ತಿಗೆ:
ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ (ಎಂಪಿಎಂ) ಕಚ್ಚಾ ವಸ್ತುವಾದ ಅಕೇಶಿಯಾ ಬೆಳೆದುಕೊಳ್ಳಲು ರಾಜ್ಯ ಸರ್ಕಾರ 1980ರಲ್ಲಿ 33 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿತ್ತು. ಈ ಅರಣ್ಯ ಪ್ರದೇಶ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ ಅದರ ಒಂದಷ್ಟು ಭಾಗ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿಗೂ ವಿಸ್ತರಿಸಿದೆ. ಎಂಪಿಎಂ 2015ರಲ್ಲಿ ಬಾಗಿಲು ಹಾಕಿದೆ. ಆದರೆ ಅದಕ್ಕೆ ಕಚ್ಚಾ ವಸ್ತು ಅಕೇಶಿಯಾ ಬೆಳೆದುಕೊಳ್ಳಲು ಕೊಟ್ಟಿರುವ ಜಾಗ ಮಾತ್ರ ಈಗಲೂ ಎಂಪಿಎಂ ಅರಣ್ಯ ಎಂಬ ದಾಖಲೆಯಲ್ಲಿಯೇ ಇದೆ. ಜೊತೆಗೆ ಅರಣ್ಯ ಇಲಾಖೆ ಪ್ರತೀ ವರ್ಷ ಕೊಡುವ ಜಿಲ್ಲೆಯ ಅರಣ್ಯ ಪ್ರದೇಶದ ವಿಸ್ತರಣೆಯ ಪಟ್ಟಿಯಲ್ಲೂ ಇದು ಒಳಗೊಂಡಿರುತ್ತದೆ.