ಭಾನುವಾರ, 1 ಮಾರ್ಚ್ 2026
×
ADVERTISEMENT
ಒಳನೋಟ | ಕೋಟಿ ವೃಕ್ಷ ಅಭಿಯಾನಕ್ಕೆ ಜನ ಸಹಭಾಗಿತ್ವ:
ಹಸಿರಾಗುತ್ತಿದೆ ವಿಜಯಪುರ
ಒಳನೋಟ | ಕೋಟಿ ವೃಕ್ಷ ಅಭಿಯಾನಕ್ಕೆ ಜನ ಸಹಭಾಗಿತ್ವ: ಹಸಿರಾಗುತ್ತಿದೆ ವಿಜಯಪುರ
ಫಾಲೋ ಮಾಡಿ
Published 28 ಫೆಬ್ರುವರಿ 2026, 23:30 IST
Last Updated 28 ಫೆಬ್ರುವರಿ 2026, 23:30 IST
Comments
6.5 ಸಾವಿರ ಹೆಕ್ಟೆರ್‌ನಲ್ಲಿ ಹಸೀರಿಕರಣ:
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ 1300 ಹೆಕ್ಟೇರ್‌, ಭೂತನಾಳದಲ್ಲಿ 200 ಹೆಕ್ಟೇರ್‌, ಮಮದಾಪುರದಲ್ಲಿ 400 ಹೆಕ್ಕೇರ್‌. ಎನ್‌ಟಿಪಿಸಿ 100, ಬೇನಾಳ 100 ಹೆಕ್ಟೇರ್‌, ಮದಬಾವಿ, ಹಲಗುಣಕಿ, ಬಬಲಾದ, ಸಾವಳಸಂಗ, ಮರಗೂರ, ಗೊಣಸಗಿ, ಬಿಜ್ಜರಗಿ, ಹಂದ್ರಾಳ, ಮಲಗಲದಿನ್ನಿ, ಚಿಕ್ಕರೂಗಿ ಸೇರಿದಂತೆ ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಮತ್ತು ಜಿಲ್ಲಾ ರಸ್ತೆಗಳ ಇಕ್ಕೆಲಗಳಲ್ಲಿ, ವಿವಿಧ ಸಂಘ– ಸಂಸ್ಥೆ, ಇಲಾಖೆಯ ಖಾಲಿ ಜಾಗದಲ್ಲಿ ಕಳೆದ ಒಂದು ದಶಕದಲ್ಲಿ 6.5 ಸಾವಿರ ಹೆಕ್ಟೇರ್‌ನಲ್ಲಿ 1.5 ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದು ವಿಜಯಪುರ ವಲಯ ಅರಣ್ಯಾಧಿಕಾರಿ(ಆರ್‌ಎಫ್‌ಒ) ಸಂತೋಷ ಆಜೂರ ತಿಳಿಸಿದರು.
ಹಸಿರು ಹೊದಿಕೆ ಹೆಚ್ಚಳ:
‘ವಿಜಯಪುರ ಜಿಲ್ಲೆಯಲ್ಲಿ ಲಭ್ಯವಿರುವ ಕಂದಾಯ (ಸಿ ಮತ್ತು ಡಿ ವರ್ಗದ) ಜಮೀನುಗಳನ್ನು ಅರಣ್ಯ ಇಲಾಖೆಗೆ ಪರಿಹಾರಾತ್ಮಕ ನೆಡುತೋಪು ಬೆಳೆಸಲು ಹಂಚಿಕೆ ಮಾಡುವಂತೆ ಕೋರಿದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿಯವರು 187 ಹೆಕ್ಟೇರ್‌ ಅರಣ್ಯೇತರ ಪ್ರದೇಶವನ್ನು ಇಲಾಖೆಯ ಹೆಸರಿಗೆ ಇಂಡೀಕರಣಗೊಳಿಸುವ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದೆ. ಇದಲ್ಲದೇ, ವಿಜಯಪುರ ಜಿಲ್ಲೆಯಲ್ಲಿ 325 ಹೆಕ್ಟೇರ್‌ ಪರಿಭಾವಿತ ಅರಣ್ಯ ಪ್ರದೇಶವನ್ನು(ಡೀಮ್ಡ್‌) ಅಧಿಸೂಚಿತಗೊಳಿಸುವ ಪ್ರಕ್ರಿಯೆ ಕೂಡ ಜಾರಿಯಲ್ಲಿದೆ. ಇದರಿಂದ ಮುಂದಿನ ದಿನಗಳಲ್ಲಿ 2318 ಹೆಕ್ಟೇರ್‌ ಅರಣ್ಯ ಪ್ರದೇಶ ಲಭ್ಯವಾಗುವುದರಿಂದ ಜಿಲ್ಲೆಯಲ್ಲಿ ಶೇ 2.07 ರಷ್ಟು ಹಸಿರು ಹೊದಿಕೆ ಹೆಚ್ಚಳವಾಗಲಿದೆ’ ಎಂದು ಬೆಳಗಾವಿ ಅರಣ್ಯ ವಿಭಾಗದ ಸಿಸಿಎಫ್‌ ಮಂಜುನಾಥ ಚವ್ಹಾಣ ಖಚಿತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT