ನವದೆಹಲಿ: ರಾಷ್ಟ್ರೀಯ ಷೇರುಪೇಟೆಯ (ಎನ್ಎಸ್ಇ) ಮಾಜಿ ಜಿಒಒ (ಗ್ರೂಪ್ ಆಪರೇಟಿಂಗ್ ಆಫೀಸರ್) ಆನಂದ್ ಸುಬ್ರಮಣಿಯನ್ ಅವರಿಗೆ ನೋಟಿಸ್ ಜಾರಿಗೊಳಿಸಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಷೇರುಪೇಟೆಯ ಆಡಳಿತದಲ್ಲಿನ ಲೋಪಗಳಿಗಾಗಿ ₹ 2.05 ಕೋಟಿ ದಂಡ ಪಾವತಿಸುವಂತೆ ಸೂಚಿಸಿದೆ.
ಹದಿನೈದು ದಿನಗಳಲ್ಲಿ ಈ ಮೊತ್ತ ಪಾವತಿಸದೆ ಇದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸುಬ್ರಮಣಿಯನ್ ಅವರ ನೇಮಕ ಪ್ರಕ್ರಿಯೆಯಲ್ಲಿನ ಲೋಪಗಳಿಗಾಗಿ ಸೆಬಿ, ಎನ್ಎಸ್ಇ ಮಾಜಿ ಅಧಿಕಾರಿಗಳಾದ ಚಿತ್ರಾ ರಾಮಕೃಷ್ಣ ಮತ್ತು ರವಿ ನಾರಾಯಣ್ ಅವರ ವಿರುದ್ಧ ಆರೋಪ ಹೊರಿಸಿದೆ. ಚಿತ್ರಾ ಅವರಿಗೆ ₹ 3 ಕೋಟಿ, ನಾರಾಯಣ್ ಅವರಿಗೆ ₹ 2 ಕೋಟಿ ದಂಡ ವಿಧಿಸಿದೆ.