ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿ ಇರುವ ವೊಡಾಫೋನ್ ಐಡಿಯಾ ಕಂಪನಿಯು ತನ್ನ ಈಚಿನ ವಾರ್ಷಿಕ ವರದಿಯಲ್ಲಿ ಆರ್ಥಿಕ ಒತ್ತಡದ ಬಗ್ಗೆ ಉಲ್ಲೇಖಿಸಿದ್ದು, ವಲಯ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರವು ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
2020-21ನೇ ಹಣಕಾಸು ವರ್ಷದಲ್ಲಿ ಅಸಮರ್ಥನೀಯ ಶುಲ್ಕ ನಿಗದಿ ಮತ್ತು ಅತಿಯಾದ ಸ್ಪರ್ಧೆಯ ನಡುವೆ ಕಾರ್ಯಾಚರಣೆಯಲ್ಲಿ ನಿರಂತರವಾಗಿ ಸವಾಲು ಎದುರಿಸಲಾಗಿದೆ.ಬೃಹತ್ ಹೂಡಿಕೆಯಲ್ಲಿ ನ್ಯಾಯೋಚಿತ ಲಾಭ ಗಳಿಸುವ ಪ್ರಯತ್ನಗಳನ್ನು ಸರ್ಕಾರ ಬೆಂಬಲಿಸುವ ವಿಶ್ವಾಸವಿದೆ ಎಂದು ಕಂಪನಿಯ ಅಧ್ಯಕ್ಷ ಹಿಮಾಂಶು ಕಪಾನಿಯಾ ಅವರು ಷೇರುದಾರರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಕುಮಾರಮಂಗಲಂ ಬಿರ್ಲಾ ಅವರು ಕಾರ್ಯನಿರ್ವಾಹಕೇತರ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ವಿಐಎಲ್ ಆಡಳಿತ ಮಂಡಳಿಯು ಕಪಾನಿಯಾ ಅವರನ್ನು ಆ ಸ್ಥಾನಕ್ಕೆ ನೇಮಿಸಿದೆ.