ಬೆಂಗಳೂರು: ಚಿನ್ನಾಭರಣ ಸಂಸ್ಥೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್, ಮದುವೆ ದಿನಗಳ ಖರೀದಿ ಸಂಭ್ರಮ ಹೆಚ್ಚಿಸಲು ವಧುವಿನ ಆಭರಣಗಳ ವಿಶಾಲ ಶ್ರೇಣಿಯ ಹೊಸ ಸಂಗ್ರಹವನ್ನು ಪರಿಚಯಿಸಿದೆ.
ಈ ಬಾರಿಯ ಮದುವೆ ಆಭರಣಗಳ ಹೊಸ ಸಂಗ್ರಹಗಳ ಮಾರಾಟ ಅಭಿಯಾನದ ಧ್ಯೇಯವಾಕ್ಯವು ‘ವಧುವಿನ ಸಂಭ್ರಮಾಚರಣೆ’ ಆಗಿದೆ.
‘ಮದುವೆ ಸಂದರ್ಭದಲ್ಲಿನ ಚಿನ್ನಾಭರಣಗಳ ಖರೀದಿಸುವವರಿಗಾಗಿ ಲಾಟರಿ ಯೋಜನೆ ಆರಂಭಿಸಲಾಗಿದೆ. ಅದೃಷ್ಟಶಾಲಿಯಾಗುವ 500 ರಿಂದ 1,000 ನವವಿವಾಹಿತರಿಗೆ ಉಚಿತ ಮಧುಚಂದ್ರ ಪ್ರವಾಸ ಸೌಲಭ್ಯ ಒದಗಿಸುತ್ತಿದೆ.
ತಮಿಳುನಾಡು ಹೊರತುಪಡಿಸಿ ದೇಶದ ಇತರ ನಗರಗಳಲ್ಲಿನ ಸಂಸ್ಥೆಯ ಷೋರೂಂಗಳಿಂದ ವಿವಾಹ ಆಭರಣಗಳನ್ನು ಖರೀದಿಸುವವರಿಗೆ ಈ ಯೋಜನೆ ಅನ್ವಯವಾಗಲಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಪಿ. ಅಹಮದ್ ಹೇಳಿದ್ದಾರೆ.