<p>1986: ಫೆಬ್ರುವರಿ: ಅಬಕಾರಿ ಸುಂಕ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ಆಗಬೇಕು ಎಂದು ಹಣಕಾಸು ಸಚಿವ ವಿಶ್ವನಾಥ್ ಪ್ರತಾಪ್ ಸಿಂಗ್<br /> 1986–87ರ ಬಜೆಟ್ನಲ್ಲಿ ಪ್ರಸ್ತಾಪ ಮಾಡಿದ್ದರು</p>.<p>2000: ಜಿಎಸ್ಟಿಯ ಸ್ವರೂಪವನ್ನು ವಿನ್ಯಾಸ ಮಾಡಲು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಸೀಂ ದಾಸ್ಗುಪ್ತಾ ನೇತೃತ್ವದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸಮಿತಿ ರಚನೆ</p>.<p>2003: ತೆರಿಗೆ ಸುಧಾರಣೆ ಶಿಫಾರಸಿಗಾಗಿ ವಿಜಯ್ ಕೇಳ್ಕರ್ ನೇತೃತ್ವದಲ್ಲಿ ಕಾರ್ಯಪಡೆ ರಚನೆ</p>.<p>2004: ಜಾರಿಯಲ್ಲಿದ್ದ ತೆರಿಗೆ ಪದ್ಧತಿಗೆ ಪರ್ಯಾಯವಾಗಿ ಜಿಎಸ್ಟಿ ಜಾರಿ ಮಾಡಬಹುದು ಎಂದು ಕೇಳ್ಕರ್ ಅವರಿಂದ ಶಿಫಾರಸು</p>.<p>2006: ಫೆಬ್ರುವರಿ, 28: ಜಿಎಸ್ಟಿ ಬಗ್ಗೆ ಬಜೆಟ್ ಭಾಷಣದಲ್ಲಿ ಪ್ರಸ್ತಾವ ಮಾಡಿದ ಹಣಕಾಸು ಸಚಿವ ಪಿ.ಚಿದಂಬರಂ. ಜಿಎಸ್ಟಿ ಅನುಷ್ಠಾನಕ್ಕೆ 2010ರ ಏಪ್ರಿಲ್1ರ ಗಡವು</p>.<p>2008: ಜಿಎಸ್ಟಿ ಅನುಷ್ಠಾನ ನೀಲನಕ್ಷೆ ಸಿದ್ಧಪಡಿಸಲು ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿರುವ ಉನ್ನತಾಧಿಕಾರ ಸಮಿತಿ ರಚನೆ</p>.<p>2008:ಏಪ್ರಿಲ್ 30: ಜಿಎಸ್ಟಿ ಅನುಷ್ಠಾನ ನೀಲನಕ್ಷೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಉನ್ನತಾಧಿಕಾರ ಸಮಿತಿ</p>.<p>2009: ದಾಸ್ಗುಪ್ತಾ ಸಮಿತಿ ವಿನ್ಯಾಸ ಮಾಡಿದ ಜಿಎಸ್ಟಿಯ ಮೂಲ ಸ್ವರೂಪವನ್ನು ಬಹಿರಂಗಪಡಿಸಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ. ಮೂಲ ಸ್ವರೂಪದ ಬಗ್ಗೆ ವಿರೋಧ ಪಕ್ಷ ಬಿಜೆಪಿಯ ಆಕ್ಷೇಪ</p>.<p>2010 ಫೆಬ್ರುವರಿ: ಜಿಎಸ್ಟಿ ಜಾರಿಗೆ ಪೂರ್ವಭಾವಿಯಾಗಿ ರಾಜ್ಯ ವಾಣಿಜ್ಯ ತೆರಿಗೆಗಳ ಕಂಪ್ಯೂಟರೀಕರಣಕ್ಕೆ ಚಾಲನೆ. ಜಿಎಸ್ಟಿ ಜಾರಿ, 2011ರ ಏಪ್ರಿಲ್ 1ಕ್ಕೆ ಮುಂದೂಡಿಕೆ</p>.<p>2011:ಮಾರ್ಚ್ 22: ಜಿಎಸ್ಜಿ ಜಾರಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ಲೋಕಸಭೆಯಲ್ಲಿ 115ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡಿಸಿದ ಯುಪಿಎ–2 ಸರ್ಕಾರ</p>.<p>ಮಾರ್ಚ್ 29: ಜಿಎಸ್ಟಿ ಮಸೂದೆ, ಯಶವಂತ್ ಸಿನ್ಹಾ ನೇತೃತ್ವದ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ. ಅಸೀಂ ದಾಸ್ಗುಪ್ತಾ ಸ್ಥಾನಕ್ಕೆ ಕೆ.ಎಂ.ಮಾಣಿ ನೇಮಕ</p>.<p>2013 ಫೆಬ್ರುವರಿ: ಜಿಎಸ್ಟಿಯಿಂದಾಗಿ ತೆರಿಗೆ ನಷ್ಟ ಅನುಭವಿಸುವದರಿಂದ<br /> ರಾಜ್ಯಗಳಿಗೆ ₹ 9,000 ಕೋಟಿ ಪರಿಹಾರ ನೀಡುವುದಾಗಿ ಬಜೆಟ್ ಭಾಷಣದಲ್ಲಿ ಘೋಷಿಸಿದ ಪಿ.ಚಿದಂಬರಂ</p>.<p>ಆಗಸ್ಟ್: ಜಿಎಸ್ಟಿಯಲ್ಲಿನ ಸುಧಾರಣೆಗಳ ಸಂಬಂಧ ವರದಿ ಸಲ್ಲಿಸಿದ ಸಂಸದೀಯ ಸ್ಥಾಯಿ ಸಮಿತಿ. ಸಂಸತ್ತಿನಲ್ಲಿ ಮಂಡನೆಗೆ ಮಸೂದೆ ಸಿದ್ಧ</p>.<p>ಅಕ್ಟೋಬರ್: ‘ಜಿಎಸ್ಟಿಯಿಂದ<br /> ರಾಜ್ಯಕ್ಕೆ ಪ್ರತಿ ವರ್ಷ ₹ 14,000 ಕೋಟಿ ತೆರಿಗೆ ನಷ್ಟವಾಗುತ್ತದೆ’ ಎಂದು ಜಿಎಸ್ಟಿ ವಿರುದ್ಧ ಧ್ವನಿ ಎತ್ತಿದ ಗುಜರಾತ್ ಮುಖ್ಯಮಂತ್ರಿ<br /> ನರೇಂದ್ರ ಮೋದಿ</p>.<p>2014: ಲೋಕಸಭೆ ವಿಸರ್ಜನೆ ಆದ ಕಾರಣ, ಸಂಸದೀಯ ಸಮಿತಿ ಪಾಸು ಮಾಡಿದ್ದ ಜಿಎಸ್ಟಿ ಮಸೂದೆ ರದ್ದಾಯಿತು. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ</p>.<p>ಡಿಸೆಂಬರ್ 18: ಜಿಎಸ್ಟಿಯ 122ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸಂಪುಟ ಒಪ್ಪಿಗೆ</p>.<p>ಡಿಸೆಂಬರ್ 19: ಲೋಕಸಭೆಯಲ್ಲಿ ಮಸೂದೆ ಮಂಡನೆ. ಕಾಂಗ್ರೆಸ್ನಿಂದ ಆಕ್ಷೇಪ</p>.<p>2015 ಫೆಬ್ರುವರಿ: 2016ರ ಏಪ್ರಿಲ್1ಕ್ಕೆ ಜಿಎಸ್ಟಿ ಜಾರಿಗೆ ಗಡವು ನಿಗದಿ ಮಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ</p>.<p>ಮೇ 6: ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ</p>.<p>ಮೇ 12: ರಾಜ್ಯಸಭೆಯಲ್ಲಿ ಮಸೂದೆ ಮಂಡನೆ. ಜಿಎಸ್ಟಿ ದರವನ್ನು ಗರಿಷ್ಠ ಶೇ18ಕ್ಕೆ ನಿಗದಿ ಮಾಡುವಂತೆ ಕಾಂಗ್ರೆಸ್ನಿಂದ ಬೇಡಿಕೆ</p>.<p>ಮೇ 14: ರಾಜಸ್ಯಸಭೆ ಮತ್ತು ಲೋಕಸಭೆಯ ಜಂಟಿ ಸಮಿತಿ ಮುಂದಕ್ಕೆ ಮಸೂದೆ</p>.<p>ಆಗಸ್ಟ್: ರಾಜ್ಯಸಭೆಯಲ್ಲಿ ಮಸೂದೆಗೆ ವಿರೋಧ ಪಕ್ಷಗಳಿಂದ ಬೆಂಬಲ ಪಡೆಯಲು ವಿಫಲವಾದ ಸರ್ಕಾರ</p>.<p>2016 ಜುಲೈ: ಜಿಎಸ್ಟಿ ದರವನ್ನು ಗರಿಷ್ಠ<br /> ಶೇ18ಕ್ಕೆ ನಿಗದಿ ಮಾಡಲು ನಿರಾಕರಿಸಿದ ಸರ್ಕಾರ</p>.<p>ಆಗಸ್ಟ್: ರಾಜ್ಯಸಭೆಯಲ್ಲಿ ಮಸೂದೆಗೆ ಬೆಂಬಲ ನೀಡಲು ಕಾಂಗ್ರೆಸ್ ಒಪ್ಪಿಗೆ. ಮಸೂದೆಗೆ ರಾಜ್ಯಸಭೆಯ ಅನುಮೋದನೆ</p>.<p>ಸೆಪ್ಟೆಂಬರ್ 2: ಮಸೂದೆಗೆ ರಾಷ್ಟ್ರಪತಿಗಳ ಅಂಕಿತ</p>.<p>ನವೆಂಬರ್ 3: ಶೇ 5, ಶೇ 12, ಶೇ 18 ಮತ್ತು ಶೇ 28ರಂತೆ ನಾಲ್ಕು ಹಂತದಲ್ಲಿ ತೆರಿಗೆ ವಿಧಿಸಲು ಜಿಎಸ್ಟಿ ಮಂಡಳಿ ಒಪ್ಪಿಗೆ. ಇದರ ಮೇಲೆ ಹೆಚ್ಚುವರಿ ಸೆಸ್ ವಿಧಿಸಲು ಅವಕಾಶ</p>.<p>2017ಜನವರಿ 16: 2017ರ ಜುಲೈ 1ರಂದು ಜಿಎಸ್ಟಿ ಜಾರಿ ಘೋಷಣೆ</p>.<p>ಫೆಬ್ರುವರಿ : ತೆರಿಗೆ ನಷ್ಟ ಅನುಭವಿಸುವುದರಿಂದ ರಾಜ್ಯ ಸರ್ಕಾರಗಳಿಗೆ ಐದು ವರ್ಷ ಪರಿಹಾರ ನೀಡಲು ಅವಕಾಶ ಮಾಡಿಕೊಡುವ ಜಿಎಸ್ಟಿ ಪೂರಕ ಮಸೂದೆಗಳ ಕರಡು ಅಂತಿಮಗೊಳಿಸಿದ ಮಂಡಳಿ</p>.<p>ಮಾರ್ಚ್ : ಜಿಎಸ್ಟಿ ಪೂರಕ ಮಸೂದೆಗಳಿಗೆ ಸಂಪುಟ ಒಪ್ಪಿಗೆ. ಸಂಸತ್ತಿನಲ್ಲಿ ಮಂಡನೆ. ಎರಡೂ ಸದನಗಳಲ್ಲಿ ಮಸೂದೆಗಳಿಗೆ ಅನುಮೋದನೆ</p>.<p>ಜೂನ್ 21 : ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳು, ರಾಜ್ಯ ಜಿಎಸ್ಟಿ ಮಸೂದೆಯನ್ನು ಪಾಸು ಮಾಡಿದವು</p>.<p>ಜೂನ್ 28 : ಮಧ್ಯರಾತ್ರಿಯಲ್ಲಿ ಜಿಎಸ್ಟಿ ಜಾರಿ ಘೋಷಣೆ ಕಾರ್ಯಕ್ರಮಕ್ಕೆ ಗೈರು ಹಾಗಲು ನಿರ್ಧರಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>1986: ಫೆಬ್ರುವರಿ: ಅಬಕಾರಿ ಸುಂಕ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ಆಗಬೇಕು ಎಂದು ಹಣಕಾಸು ಸಚಿವ ವಿಶ್ವನಾಥ್ ಪ್ರತಾಪ್ ಸಿಂಗ್<br /> 1986–87ರ ಬಜೆಟ್ನಲ್ಲಿ ಪ್ರಸ್ತಾಪ ಮಾಡಿದ್ದರು</p>.<p>2000: ಜಿಎಸ್ಟಿಯ ಸ್ವರೂಪವನ್ನು ವಿನ್ಯಾಸ ಮಾಡಲು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಸೀಂ ದಾಸ್ಗುಪ್ತಾ ನೇತೃತ್ವದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸಮಿತಿ ರಚನೆ</p>.<p>2003: ತೆರಿಗೆ ಸುಧಾರಣೆ ಶಿಫಾರಸಿಗಾಗಿ ವಿಜಯ್ ಕೇಳ್ಕರ್ ನೇತೃತ್ವದಲ್ಲಿ ಕಾರ್ಯಪಡೆ ರಚನೆ</p>.<p>2004: ಜಾರಿಯಲ್ಲಿದ್ದ ತೆರಿಗೆ ಪದ್ಧತಿಗೆ ಪರ್ಯಾಯವಾಗಿ ಜಿಎಸ್ಟಿ ಜಾರಿ ಮಾಡಬಹುದು ಎಂದು ಕೇಳ್ಕರ್ ಅವರಿಂದ ಶಿಫಾರಸು</p>.<p>2006: ಫೆಬ್ರುವರಿ, 28: ಜಿಎಸ್ಟಿ ಬಗ್ಗೆ ಬಜೆಟ್ ಭಾಷಣದಲ್ಲಿ ಪ್ರಸ್ತಾವ ಮಾಡಿದ ಹಣಕಾಸು ಸಚಿವ ಪಿ.ಚಿದಂಬರಂ. ಜಿಎಸ್ಟಿ ಅನುಷ್ಠಾನಕ್ಕೆ 2010ರ ಏಪ್ರಿಲ್1ರ ಗಡವು</p>.<p>2008: ಜಿಎಸ್ಟಿ ಅನುಷ್ಠಾನ ನೀಲನಕ್ಷೆ ಸಿದ್ಧಪಡಿಸಲು ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿರುವ ಉನ್ನತಾಧಿಕಾರ ಸಮಿತಿ ರಚನೆ</p>.<p>2008:ಏಪ್ರಿಲ್ 30: ಜಿಎಸ್ಟಿ ಅನುಷ್ಠಾನ ನೀಲನಕ್ಷೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಉನ್ನತಾಧಿಕಾರ ಸಮಿತಿ</p>.<p>2009: ದಾಸ್ಗುಪ್ತಾ ಸಮಿತಿ ವಿನ್ಯಾಸ ಮಾಡಿದ ಜಿಎಸ್ಟಿಯ ಮೂಲ ಸ್ವರೂಪವನ್ನು ಬಹಿರಂಗಪಡಿಸಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ. ಮೂಲ ಸ್ವರೂಪದ ಬಗ್ಗೆ ವಿರೋಧ ಪಕ್ಷ ಬಿಜೆಪಿಯ ಆಕ್ಷೇಪ</p>.<p>2010 ಫೆಬ್ರುವರಿ: ಜಿಎಸ್ಟಿ ಜಾರಿಗೆ ಪೂರ್ವಭಾವಿಯಾಗಿ ರಾಜ್ಯ ವಾಣಿಜ್ಯ ತೆರಿಗೆಗಳ ಕಂಪ್ಯೂಟರೀಕರಣಕ್ಕೆ ಚಾಲನೆ. ಜಿಎಸ್ಟಿ ಜಾರಿ, 2011ರ ಏಪ್ರಿಲ್ 1ಕ್ಕೆ ಮುಂದೂಡಿಕೆ</p>.<p>2011:ಮಾರ್ಚ್ 22: ಜಿಎಸ್ಜಿ ಜಾರಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ಲೋಕಸಭೆಯಲ್ಲಿ 115ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡಿಸಿದ ಯುಪಿಎ–2 ಸರ್ಕಾರ</p>.<p>ಮಾರ್ಚ್ 29: ಜಿಎಸ್ಟಿ ಮಸೂದೆ, ಯಶವಂತ್ ಸಿನ್ಹಾ ನೇತೃತ್ವದ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ. ಅಸೀಂ ದಾಸ್ಗುಪ್ತಾ ಸ್ಥಾನಕ್ಕೆ ಕೆ.ಎಂ.ಮಾಣಿ ನೇಮಕ</p>.<p>2013 ಫೆಬ್ರುವರಿ: ಜಿಎಸ್ಟಿಯಿಂದಾಗಿ ತೆರಿಗೆ ನಷ್ಟ ಅನುಭವಿಸುವದರಿಂದ<br /> ರಾಜ್ಯಗಳಿಗೆ ₹ 9,000 ಕೋಟಿ ಪರಿಹಾರ ನೀಡುವುದಾಗಿ ಬಜೆಟ್ ಭಾಷಣದಲ್ಲಿ ಘೋಷಿಸಿದ ಪಿ.ಚಿದಂಬರಂ</p>.<p>ಆಗಸ್ಟ್: ಜಿಎಸ್ಟಿಯಲ್ಲಿನ ಸುಧಾರಣೆಗಳ ಸಂಬಂಧ ವರದಿ ಸಲ್ಲಿಸಿದ ಸಂಸದೀಯ ಸ್ಥಾಯಿ ಸಮಿತಿ. ಸಂಸತ್ತಿನಲ್ಲಿ ಮಂಡನೆಗೆ ಮಸೂದೆ ಸಿದ್ಧ</p>.<p>ಅಕ್ಟೋಬರ್: ‘ಜಿಎಸ್ಟಿಯಿಂದ<br /> ರಾಜ್ಯಕ್ಕೆ ಪ್ರತಿ ವರ್ಷ ₹ 14,000 ಕೋಟಿ ತೆರಿಗೆ ನಷ್ಟವಾಗುತ್ತದೆ’ ಎಂದು ಜಿಎಸ್ಟಿ ವಿರುದ್ಧ ಧ್ವನಿ ಎತ್ತಿದ ಗುಜರಾತ್ ಮುಖ್ಯಮಂತ್ರಿ<br /> ನರೇಂದ್ರ ಮೋದಿ</p>.<p>2014: ಲೋಕಸಭೆ ವಿಸರ್ಜನೆ ಆದ ಕಾರಣ, ಸಂಸದೀಯ ಸಮಿತಿ ಪಾಸು ಮಾಡಿದ್ದ ಜಿಎಸ್ಟಿ ಮಸೂದೆ ರದ್ದಾಯಿತು. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ</p>.<p>ಡಿಸೆಂಬರ್ 18: ಜಿಎಸ್ಟಿಯ 122ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸಂಪುಟ ಒಪ್ಪಿಗೆ</p>.<p>ಡಿಸೆಂಬರ್ 19: ಲೋಕಸಭೆಯಲ್ಲಿ ಮಸೂದೆ ಮಂಡನೆ. ಕಾಂಗ್ರೆಸ್ನಿಂದ ಆಕ್ಷೇಪ</p>.<p>2015 ಫೆಬ್ರುವರಿ: 2016ರ ಏಪ್ರಿಲ್1ಕ್ಕೆ ಜಿಎಸ್ಟಿ ಜಾರಿಗೆ ಗಡವು ನಿಗದಿ ಮಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ</p>.<p>ಮೇ 6: ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ</p>.<p>ಮೇ 12: ರಾಜ್ಯಸಭೆಯಲ್ಲಿ ಮಸೂದೆ ಮಂಡನೆ. ಜಿಎಸ್ಟಿ ದರವನ್ನು ಗರಿಷ್ಠ ಶೇ18ಕ್ಕೆ ನಿಗದಿ ಮಾಡುವಂತೆ ಕಾಂಗ್ರೆಸ್ನಿಂದ ಬೇಡಿಕೆ</p>.<p>ಮೇ 14: ರಾಜಸ್ಯಸಭೆ ಮತ್ತು ಲೋಕಸಭೆಯ ಜಂಟಿ ಸಮಿತಿ ಮುಂದಕ್ಕೆ ಮಸೂದೆ</p>.<p>ಆಗಸ್ಟ್: ರಾಜ್ಯಸಭೆಯಲ್ಲಿ ಮಸೂದೆಗೆ ವಿರೋಧ ಪಕ್ಷಗಳಿಂದ ಬೆಂಬಲ ಪಡೆಯಲು ವಿಫಲವಾದ ಸರ್ಕಾರ</p>.<p>2016 ಜುಲೈ: ಜಿಎಸ್ಟಿ ದರವನ್ನು ಗರಿಷ್ಠ<br /> ಶೇ18ಕ್ಕೆ ನಿಗದಿ ಮಾಡಲು ನಿರಾಕರಿಸಿದ ಸರ್ಕಾರ</p>.<p>ಆಗಸ್ಟ್: ರಾಜ್ಯಸಭೆಯಲ್ಲಿ ಮಸೂದೆಗೆ ಬೆಂಬಲ ನೀಡಲು ಕಾಂಗ್ರೆಸ್ ಒಪ್ಪಿಗೆ. ಮಸೂದೆಗೆ ರಾಜ್ಯಸಭೆಯ ಅನುಮೋದನೆ</p>.<p>ಸೆಪ್ಟೆಂಬರ್ 2: ಮಸೂದೆಗೆ ರಾಷ್ಟ್ರಪತಿಗಳ ಅಂಕಿತ</p>.<p>ನವೆಂಬರ್ 3: ಶೇ 5, ಶೇ 12, ಶೇ 18 ಮತ್ತು ಶೇ 28ರಂತೆ ನಾಲ್ಕು ಹಂತದಲ್ಲಿ ತೆರಿಗೆ ವಿಧಿಸಲು ಜಿಎಸ್ಟಿ ಮಂಡಳಿ ಒಪ್ಪಿಗೆ. ಇದರ ಮೇಲೆ ಹೆಚ್ಚುವರಿ ಸೆಸ್ ವಿಧಿಸಲು ಅವಕಾಶ</p>.<p>2017ಜನವರಿ 16: 2017ರ ಜುಲೈ 1ರಂದು ಜಿಎಸ್ಟಿ ಜಾರಿ ಘೋಷಣೆ</p>.<p>ಫೆಬ್ರುವರಿ : ತೆರಿಗೆ ನಷ್ಟ ಅನುಭವಿಸುವುದರಿಂದ ರಾಜ್ಯ ಸರ್ಕಾರಗಳಿಗೆ ಐದು ವರ್ಷ ಪರಿಹಾರ ನೀಡಲು ಅವಕಾಶ ಮಾಡಿಕೊಡುವ ಜಿಎಸ್ಟಿ ಪೂರಕ ಮಸೂದೆಗಳ ಕರಡು ಅಂತಿಮಗೊಳಿಸಿದ ಮಂಡಳಿ</p>.<p>ಮಾರ್ಚ್ : ಜಿಎಸ್ಟಿ ಪೂರಕ ಮಸೂದೆಗಳಿಗೆ ಸಂಪುಟ ಒಪ್ಪಿಗೆ. ಸಂಸತ್ತಿನಲ್ಲಿ ಮಂಡನೆ. ಎರಡೂ ಸದನಗಳಲ್ಲಿ ಮಸೂದೆಗಳಿಗೆ ಅನುಮೋದನೆ</p>.<p>ಜೂನ್ 21 : ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳು, ರಾಜ್ಯ ಜಿಎಸ್ಟಿ ಮಸೂದೆಯನ್ನು ಪಾಸು ಮಾಡಿದವು</p>.<p>ಜೂನ್ 28 : ಮಧ್ಯರಾತ್ರಿಯಲ್ಲಿ ಜಿಎಸ್ಟಿ ಜಾರಿ ಘೋಷಣೆ ಕಾರ್ಯಕ್ರಮಕ್ಕೆ ಗೈರು ಹಾಗಲು ನಿರ್ಧರಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>