ನವದೆಹಲಿ: ಕಚ್ಚಾ ತೈಲ ದರ ಏರಿಕೆ ಮತ್ತು ಸರ್ಕಾರಿ ಸಾಲಪತ್ರಗಳ ಗಳಿಕೆಯಲ್ಲಿ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ವಿದೇಶಿ ಬಂಡವಾಳ ಹೊರಹರಿವಿನ ಪ್ರಮಾಣ ಹೆಚ್ಚುತ್ತಿದೆ.
ಏಪ್ರಿಲ್ ತಿಂಗಳಿನಲ್ಲಿ ವಿದೇಶಿ ಹೂಡಿಕೆದಾರರು ಬಂಡವಾಳ ಮಾರುಕಟ್ಟೆಯಿಂದ ₹ 15,500 ಕೋಟಿ ಹಿಂದಕ್ಕೆ ಪಡೆದಿದ್ದಾರೆ. ಹೂಡಿಕೆದಾರರು 16 ತಿಂಗಳಿನಲ್ಲಿ (2016ರ ಡಿಸೆಂಬರ್ ನಂತರ) ಷೇರುಪೇಟೆಯಿಂದ ಹಿಂದಕ್ಕೆ ಪಡೆದ ಹೆಚ್ಚಿನ ಮೊತ್ತ ಇದಾಗಿದೆ. ಆ ಸಮಯದಲ್ಲಿ ₹ 27 ಸಾವಿರ ಕೋಟಿ ಹಿಂದಕ್ಕೆ ಪಡೆದಿದ್ದರು.
‘ವಹಿವಾಟುದಾರರು ಅಮೆರಿಕ–ಇರಾನ್ ಬೆಳವಣಿಗೆಗಳು, ಕರ್ನಾಟಕದ ಚುನಾವಣೆಯನ್ನು ಬಹಳ ಎಚ್ಚರಿಕೆಯಿಂದ ಎದುರು ನೋಡುತ್ತಿದ್ದಾರೆ. ಇದರಿಂದ ವಹಿವಾಟು ಇಳಿಮುಖವಾಗಿದೆ’ ಎಂದು ಪ್ರಭುದಾಸ್ ಲೀಲಾಧರ್ನ ಸಿಇಒ ಅಜಯ್ ಭೋಡ್ಕೆ ಅಭಿಪ್ರಾಯಪಟ್ಟಿದ್ದಾರೆ.