ಹೊನ್ನಾವರ: ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ ₹7 ಲಕ್ಷ ನಗದನ್ನು, ಪಟ್ಟಣದ ಬೆಂಗಳೂರು ರಸ್ತೆಯ ಸಾಗರ್ ರೆಸಿಡೆನ್ಸಿ ಸಮೀಪ ಮಂಗಳವಾರ ಸಂಜೆ ಪೊಲೀಸರು ಜಪ್ತಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಿರಿಯ ಎಂಜಿನಿಯರ್ ಗಂಗಾನಾಯ್ಕ ಅವರು ಪ್ರಯಾಣಿಸುತ್ತಿದ್ದ ಜೀಪಿನಲ್ಲಿ ಈ ಹಣವನ್ನು ಸಾಗಿಸಲಾಗುತ್ತಿತ್ತು. ಕುಮಟಾದ ವ್ಯಕ್ತಿಯೊಬ್ಬರಿಂದ ಪಡೆದ ಹಣವನ್ನು ಹೊನ್ನಾವರ ತಾಲ್ಲೂಕಿನ ಬಂಗಾರಮಕ್ಕಿಯತ್ತ ತೆಗೆದುಕೊಂಡು ಹೋಗುತ್ತಿದ್ದುದಾಗಿ ಅವರು ಹೇಳಿದ್ದಾರೆ.
ಈ ಸಂಬಂಧ ಗಂಗಾನಾಯ್ಕ ಹಾಗೂ ಅವರು ಪ್ರಯಾಣಿಸುತ್ತಿದ್ದ ಜೀಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಹಶೀಲ್ದಾರ್ ಮಾರುತಿ ನಾಯ್ಕ ತಿಳಿಸಿದ್ದಾರೆ.