<p><strong>ಬಾದಾಮಿ:</strong> ಬನಶಂಕರಿದೇವಿ ಜಾತ್ರೆ ಅಂಗವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಜಾನುವಾರ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ. </p>.<p>ಪಶು ಸಂಗೋಪನೆ ಇಲಾಖೆಯ ಮಳಿಗೆಗಳು ಮತ್ತು ಎತ್ತುಗಳ ಅಲಂಕಾರಕ್ಕಾಗಿ ಅಂಗಡಿಗಳಲ್ಲಿ ರೈತರು ವ್ಯಾಪಾರ ವಹಿವಾಟು ನಡೆಸಿದರು.</p>.<p>‘ ಜಾತ್ರೆಯಲ್ಲಿ ಅಮೀನಗಡದ ಚಕ್ಕಡಿ ಮಾರಾಟ ಜೋರಾಗಿತ್ತು. ಒಂದು ಚಕ್ಕಡಿಗೆ ₹25 ಸಾವಿರದಿಂದ ₹30 ಸಾವಿರದವರೆಗೆ ಮಾರಾಟವಾಗುತ್ತವೆ’ ಎಂದು ಮಲ್ಲಪ್ಪ ಬಡಿಗೇರ ಹೇಳಿದರು.</p>.<p>‘ಈ ಸಲ ದನದ ಜ್ಯಾತ್ರ್ಯಾಗ ಕಡಿಮಿ ದನ ಬಂದಾವು. ಥಂಡಿ ಭಾಳ ಐತ್ರಿ, ಹಿಂಗಾಗಿ ರೈತರು ಎತ್ತು ಹೊಡಕೊಂಡು ಬಂದಿಲ್ಲ’ ಎಂದು ಯರಗೊಪ್ಪ ಎಸ್.ಬಿ. ಗ್ರಾಮದ ರೈತ ಶರಣಪ್ಪ ಹೇಳಿದರು.</p>.<p>‘ಜಾತ್ರಿಗ ಬಂದು ಎರಡು ಮೂರು ದಿನ ಆತು ವ್ಯಾಪಾರ ಇಲ್ಲ. ರೈತರ ಕೈಯ್ಯಾಗ ರೊಕ್ಕ ಇಲ್ಲ, ಎಲ್ಲಾರು ಟ್ರ್ಯಾಕ್ಟರ್ ಮಾಡ್ಯಾರ ಎತ್ತು ತೊಗೊಳ್ಳುವವರು ಕಡಿಮೆ ಆಗ್ಯಾರ ’ ಎಂದು ಬೂದಿಹಾಳ ಗ್ರಾಮದ ಚನ್ನಬಸಪ್ಪ ಪ್ರತಿಕ್ರಿಯಿಸಿದರು.</p>.<p>ಜಾತ್ರೆಯಲ್ಲಿ ಅಥಣಿ ತಾಲ್ಲೂಕಿನ ರೈತ ತಾನಾಜಿ ತೆಗೆದುಕೊಂಡು ಬಂದಿರುವ ಹೋರಿಗಳು ಆಕರ್ಷಕವಾಗಿದ್ದವು. ಹಾಲಲ್ಲಿ ಮತ್ತು ನಾಲ್ಕು ಹಲ್ಲಿನ ಹೋರಿಗಳನ್ನು ರೈತರು ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ಬನಶಂಕರಿದೇವಿ ಜಾತ್ರೆ ಅಂಗವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಜಾನುವಾರ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ. </p>.<p>ಪಶು ಸಂಗೋಪನೆ ಇಲಾಖೆಯ ಮಳಿಗೆಗಳು ಮತ್ತು ಎತ್ತುಗಳ ಅಲಂಕಾರಕ್ಕಾಗಿ ಅಂಗಡಿಗಳಲ್ಲಿ ರೈತರು ವ್ಯಾಪಾರ ವಹಿವಾಟು ನಡೆಸಿದರು.</p>.<p>‘ ಜಾತ್ರೆಯಲ್ಲಿ ಅಮೀನಗಡದ ಚಕ್ಕಡಿ ಮಾರಾಟ ಜೋರಾಗಿತ್ತು. ಒಂದು ಚಕ್ಕಡಿಗೆ ₹25 ಸಾವಿರದಿಂದ ₹30 ಸಾವಿರದವರೆಗೆ ಮಾರಾಟವಾಗುತ್ತವೆ’ ಎಂದು ಮಲ್ಲಪ್ಪ ಬಡಿಗೇರ ಹೇಳಿದರು.</p>.<p>‘ಈ ಸಲ ದನದ ಜ್ಯಾತ್ರ್ಯಾಗ ಕಡಿಮಿ ದನ ಬಂದಾವು. ಥಂಡಿ ಭಾಳ ಐತ್ರಿ, ಹಿಂಗಾಗಿ ರೈತರು ಎತ್ತು ಹೊಡಕೊಂಡು ಬಂದಿಲ್ಲ’ ಎಂದು ಯರಗೊಪ್ಪ ಎಸ್.ಬಿ. ಗ್ರಾಮದ ರೈತ ಶರಣಪ್ಪ ಹೇಳಿದರು.</p>.<p>‘ಜಾತ್ರಿಗ ಬಂದು ಎರಡು ಮೂರು ದಿನ ಆತು ವ್ಯಾಪಾರ ಇಲ್ಲ. ರೈತರ ಕೈಯ್ಯಾಗ ರೊಕ್ಕ ಇಲ್ಲ, ಎಲ್ಲಾರು ಟ್ರ್ಯಾಕ್ಟರ್ ಮಾಡ್ಯಾರ ಎತ್ತು ತೊಗೊಳ್ಳುವವರು ಕಡಿಮೆ ಆಗ್ಯಾರ ’ ಎಂದು ಬೂದಿಹಾಳ ಗ್ರಾಮದ ಚನ್ನಬಸಪ್ಪ ಪ್ರತಿಕ್ರಿಯಿಸಿದರು.</p>.<p>ಜಾತ್ರೆಯಲ್ಲಿ ಅಥಣಿ ತಾಲ್ಲೂಕಿನ ರೈತ ತಾನಾಜಿ ತೆಗೆದುಕೊಂಡು ಬಂದಿರುವ ಹೋರಿಗಳು ಆಕರ್ಷಕವಾಗಿದ್ದವು. ಹಾಲಲ್ಲಿ ಮತ್ತು ನಾಲ್ಕು ಹಲ್ಲಿನ ಹೋರಿಗಳನ್ನು ರೈತರು ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>