ಬಾಗಲಕೋಟೆ: ಐದು ಬಾರಿ ಸತತ ಗೆಲುವು, ವಿವಿಧ ಸಮಿತಿಗಳಲ್ಲಿ ಗಳಿಸಿದ ಅನುಭವಕ್ಕೆ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ರಾಜ್ಯದಿಂದ ರಾಜ್ಯಸಭೆ, ಲೋಕಸಭೆಗೆ ಆಯ್ಕೆಯಾಗಿರುವ ಐವರಿಗೆ ಸಚಿವ ಸ್ಥಾನ ದೊರಕಿದೆ. ಅದರಲ್ಲಿ ಜಿಲ್ಲೆಯ ಸಂಸದರ ಹೆಸರಿಲ್ಲದಿರುವುದು ಜಿಲ್ಲೆಯ ಮುಖಂಡರಿಗೆ, ಜನರಿಗೆ ನಿರಾಸೆಯುಂಟು ಮಾಡಿದೆ.