<p><strong>ಬಾಗಲಕೋಟೆ:</strong> ನಗರದಲ್ಲಿ ಬಿದ್ದಿರುವಪ್ಲಾಸ್ಟಿಕ್ ಅನ್ನು ಆಯ್ದು ಸ್ವಚ್ಛಗೊಳಿಸಿ ಹೊಟೇಲ್ಗೆ ಬರುವವರಿಗೆಜಮಖಂಡಿಯ ಅನ್ನಪೂರ್ಣೇಶ್ವರಿ ಹೊಟೇಲ್ ಮಾಲೀಕ ಈರಯ್ಯ ಕಲ್ಯಾಣಿ ಉಚಿತವಾಗಿ ಊಟ ಹಾಕುತ್ತಾರೆ!</p>.<p>ಪರಿಸರಕ್ಕೆ ಮಾರಕ ಎನಿಸಿದ ಪ್ಲಾಸ್ಟಿಕ್ ಬಳಕೆಯನ್ನು ಕೇಂದ್ರ ಸರ್ಕಾರ ಅಕ್ಟೋಬರ್ 2ರಿಂದ ನಿಷೇಧಿಸಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈರಯ್ಯ ಪ್ಲಾಸ್ಟಿಕ್ ಆಯ್ದು ಸ್ವಚ್ಛಗೊಳಿಸಿದ ಚಿತ್ರದೊಂದಿಗೆ ಹೊಟೇಲ್ಗೆ ಬರುವವರಿಗೆ ಶನಿವಾರ ಹಾಗೂ ಭಾನುವಾರ (ಅಕ್ಟೋಬರ್ 19, 20) ಉಚಿತವಾಗಿ ಊಟ ನೀಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.</p>.<p>'ಪ್ಲಾಸ್ಟಿಕ್ ಮಾರಕ ಎಂದು ಅರಿತು ಕೇಂದ್ರ ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದೆ. ಈ ವಿಚಾರದಲ್ಲಿ ನಾನು ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಒಂದು ಕೆ.ಜಿ ಪ್ಲಾಸ್ಟಿಕ್ ತನ್ನಿ, ಒಂದು ಊಟ ಉಚಿತವಾಗಿ ಪಡೆಯಿರಿ ಎಂಬ ವಿನೂತನ ಪ್ರಯೋಗ ಆರಂಭಿಸಿದೆ' ಎಂದು ಈರಯ್ಯ ಕಲ್ಯಾಣಿ ಹೇಳುತ್ತಾರೆ.</p>.<p>‘ನಮ್ಮ ಹೊಟೇಲ್ನಿಂದ ಊಟ ಪಾರ್ಸಲ್ ತೆಗೆದುಕೊಂಡು ಹೋಗುವವರಿಗಾಗಿ ಬಾಳೆ ಎಲೆಯಲ್ಲಿ ಊಟ ಕಟ್ಟಿ ಕೊಡುತ್ತಿದ್ದೇವೆ ಹಾಗೂ ಸಾಂಬರ್ನಂತಹ ಪದಾರ್ಥಗಳನ್ನು ರಟ್ಟಿನ ಡಬ್ಬದಲ್ಲಿ ಹಾಕಿ ಕೊಡಲಾಗುವುದು‘ ಎನ್ನುತ್ತಾರೆ.</p>.<p>‘ಜಮಖಂಡಿ ಸೇರಿದಂತೆ ಬೇರೆ ಬೇರೆ ಕಡೆ ನಮ್ಮ ಆರು ಹೊಟೇಲ್ಗಳಿವೆ. ನಗರದ ಅರ್ಬನ್ ಬ್ಯಾಂಕ್ನ ಎದುರಿನ ಹೊಟೇಲ್ನಲ್ಲಿ ಈ ಪ್ರಯೋಗ ಮಾಡಿದ್ದು, ಎರಡು ದಿನಗಳಲ್ಲಿ 10 ಕೆ.ಜಿಯಷ್ಟು ಪ್ಲಾಸ್ಟಿಕ್ ಸಂಗ್ರಹವಾಗಿದೆ. ಅದನ್ನು ನಗರಸಭೆ ಸುಪರ್ದಿಗೆ ಕೊಡಲಾಗಿದೆ’ ಎನ್ನುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ನಗರದಲ್ಲಿ ಬಿದ್ದಿರುವಪ್ಲಾಸ್ಟಿಕ್ ಅನ್ನು ಆಯ್ದು ಸ್ವಚ್ಛಗೊಳಿಸಿ ಹೊಟೇಲ್ಗೆ ಬರುವವರಿಗೆಜಮಖಂಡಿಯ ಅನ್ನಪೂರ್ಣೇಶ್ವರಿ ಹೊಟೇಲ್ ಮಾಲೀಕ ಈರಯ್ಯ ಕಲ್ಯಾಣಿ ಉಚಿತವಾಗಿ ಊಟ ಹಾಕುತ್ತಾರೆ!</p>.<p>ಪರಿಸರಕ್ಕೆ ಮಾರಕ ಎನಿಸಿದ ಪ್ಲಾಸ್ಟಿಕ್ ಬಳಕೆಯನ್ನು ಕೇಂದ್ರ ಸರ್ಕಾರ ಅಕ್ಟೋಬರ್ 2ರಿಂದ ನಿಷೇಧಿಸಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈರಯ್ಯ ಪ್ಲಾಸ್ಟಿಕ್ ಆಯ್ದು ಸ್ವಚ್ಛಗೊಳಿಸಿದ ಚಿತ್ರದೊಂದಿಗೆ ಹೊಟೇಲ್ಗೆ ಬರುವವರಿಗೆ ಶನಿವಾರ ಹಾಗೂ ಭಾನುವಾರ (ಅಕ್ಟೋಬರ್ 19, 20) ಉಚಿತವಾಗಿ ಊಟ ನೀಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.</p>.<p>'ಪ್ಲಾಸ್ಟಿಕ್ ಮಾರಕ ಎಂದು ಅರಿತು ಕೇಂದ್ರ ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದೆ. ಈ ವಿಚಾರದಲ್ಲಿ ನಾನು ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಒಂದು ಕೆ.ಜಿ ಪ್ಲಾಸ್ಟಿಕ್ ತನ್ನಿ, ಒಂದು ಊಟ ಉಚಿತವಾಗಿ ಪಡೆಯಿರಿ ಎಂಬ ವಿನೂತನ ಪ್ರಯೋಗ ಆರಂಭಿಸಿದೆ' ಎಂದು ಈರಯ್ಯ ಕಲ್ಯಾಣಿ ಹೇಳುತ್ತಾರೆ.</p>.<p>‘ನಮ್ಮ ಹೊಟೇಲ್ನಿಂದ ಊಟ ಪಾರ್ಸಲ್ ತೆಗೆದುಕೊಂಡು ಹೋಗುವವರಿಗಾಗಿ ಬಾಳೆ ಎಲೆಯಲ್ಲಿ ಊಟ ಕಟ್ಟಿ ಕೊಡುತ್ತಿದ್ದೇವೆ ಹಾಗೂ ಸಾಂಬರ್ನಂತಹ ಪದಾರ್ಥಗಳನ್ನು ರಟ್ಟಿನ ಡಬ್ಬದಲ್ಲಿ ಹಾಕಿ ಕೊಡಲಾಗುವುದು‘ ಎನ್ನುತ್ತಾರೆ.</p>.<p>‘ಜಮಖಂಡಿ ಸೇರಿದಂತೆ ಬೇರೆ ಬೇರೆ ಕಡೆ ನಮ್ಮ ಆರು ಹೊಟೇಲ್ಗಳಿವೆ. ನಗರದ ಅರ್ಬನ್ ಬ್ಯಾಂಕ್ನ ಎದುರಿನ ಹೊಟೇಲ್ನಲ್ಲಿ ಈ ಪ್ರಯೋಗ ಮಾಡಿದ್ದು, ಎರಡು ದಿನಗಳಲ್ಲಿ 10 ಕೆ.ಜಿಯಷ್ಟು ಪ್ಲಾಸ್ಟಿಕ್ ಸಂಗ್ರಹವಾಗಿದೆ. ಅದನ್ನು ನಗರಸಭೆ ಸುಪರ್ದಿಗೆ ಕೊಡಲಾಗಿದೆ’ ಎನ್ನುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>