ಈರಪ್ಪ ಹಾಗೂ ಗೌರವ್ವ ಮನೆಯ ಮುಂದಿನ ಕೋಣೆಯಲ್ಲಿ ಮಲಗಿದ್ದು, ಮಳೆಗೆ ಮಣ್ಣಿನ ಮೇಲ್ಛಾವಣಿ ನೆನೆದು ಒಳಗೆ ನೀರು ಸೋರ ತೊಡಗಿದೆ. ಆಗ ಎಚ್ಚರಗೊಂಡ ನಿಂಗಪ್ಪ, ಅಪ್ಪ-ಅಮ್ಮನ ಕೋಣೆಯಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರನ್ನು ಹೊರಗೆ ಹಾಕಲು ಮುಂದಾಗಿದ್ದಾರೆ. ಈ ವೇಳೆ ಪಕ್ಕದ ಮನೆಯ ಮೇಲಿನ ಗೋಡೆ ಕುಸಿದ ಇವರ ಮನೆಯ ಮೇಲೆ ಬಿದ್ದ ಪರಿಣಾಮ ಛಾವಣಿ ಸಮೇತ ಕುಸಿದಿದೆ. ಕೆಳಗೆ ಸಿಲುಕಿದ ಮೂವರು ಮೃತಪಟ್ಟಿದ್ದಾರೆ.