ಚಿತ್ರ ಬಿಡಿಸುವ ಮೂಲಕ ಪ್ರದರ್ಶನ ಉದ್ಘಾಟಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಗಂಗಾಧರ ಪಾಟೀಲ ಮಾತನಾಡಿ, ‘ವಿವಿಧ ಕಡೆಗಳಲ್ಲಿ ಚಿತ್ರಕಲಾ ಪ್ರದರ್ಶನ ಆಯೋಜಿಸುವುದರಿಂದ ಉದಯೋನ್ಮುಖ ಚಿತ್ರ ಕಲಾವಿದರಿಗೆ ಸಹೃದಯಿ ಕಲಾಭಿಮಾನಿಗಳ ಮೆಚ್ಚುಗೆ, ಕಲಾ ವಿಮರ್ಶಕರ ಸಲಹೆಗಳು ಇನ್ನಷ್ಟು ಸಾಧನೆ ಮಾಡಲು ಪ್ರೇರಕವಾಗುತ್ತವೆ. ಹೆಚ್ಚೆಚ್ಚು ಜನರು ತನ್ನ ಕಲಾಕೃತಿಗಳನ್ನು ವೀಕ್ಷಿಸಬೇಕು ಎಂಬುದು ಎಲ್ಲ ಸೃಜನಶೀಲರ ಕಲಾವಿದರ ಆಸೆಯಾಗಿರುತ್ತದೆ. ಮಹೇಶ ವಾಲೀಕಾರ ಅವರ ಸಂಯೋಜನೆ, ರೇಖೆಗಳು ಕಲಾಕೃತಿಯನ್ನು ಹಲವು ಅರ್ಥಗಳಲ್ಲಿ ಬೆಳೆಸುತ್ತವೆ. ಕಲಾವಿದನಾಗಿ ಅತ್ಯುತ್ತಮ ಪರಿಕಲ್ಪನೆಗಳನ್ನು ಚಿತ್ರಗಳಾಗಿ ಆಕಾರ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.