ಕಳೆದ 45 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡಿದ್ದೇನೆ. ಪಕ್ಷ ನನಗೆ ಅನೇಕ ಸ್ಥಾನಮಾನ ಕೊಟ್ಟು, ಜನಸೇವೆ ಮಾಡಲು ಅವಕಾಶ ಕಲ್ಪಿಸಿದೆ. ಪಕ್ಷ ದೊಡ್ಡದು. ತಾಯಿ ಸಮಾನ. ಅದರ ನಿರ್ಣಯ ಗೌರವಿಸೋಣ ಎಂದು ಕಾರ್ಯಕರ್ತರು, ಅಭಿಮಾನಿಗಳಿಗೆ ಹೇಳಿದ್ದೇನೆ. ನನಗೆ ಟಿಕೆಟ್ ತಪ್ಪಿದೆ ಎಂದು ಪಕ್ಷಕ್ಕೆ ಹಾನಿ ಮಾಡುವುದಕ್ಕೆ ಕೈ ಹಾಕಿಬೇಡಿ ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.