12 ಗಂಟೆಗೆ ಸರಿಯಾಗಿ ಬಸವಣ್ಣವರ ಐಕ್ಯ ಸ್ಥಳದಲ್ಲಿ ಕುಳಿತು ವಚನ ಪಠಿಸಿದರು. ‘ಮೀಸಲಾತಿ ಹೋರಾಟಕ್ಕೆ ನ್ಯಾಯ ದೊರೆಯಲಿ, ನಾಡಿನಾದ್ಯಂತ ಉತ್ತಮ ಮಳೆ ಬೆಳೆ ದೊರಯಲಿ. ವಿಶ್ವದಾದ್ಯಂತ ಶಾಂತಿ ನೆಲೆಸಲಿ, ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕನಿಗೆ ಒಳಿತಾಗಲಿ’ ಎಂದು ಹೇಳಿದರು. ಮುಖಂಡರಾದ ಬಸವರಾಜ ರಕ್ಕಸಗಿ, ಬಿ.ಕೆ.ಗೌಡರ ಮುಂತಾದವರು ಇದ್ದರು.