ಬೀಳಗಿ: ತಾಲ್ಲೂಕಿನ ಗೋವಿನದಿನ್ನಿ, ಟಕ್ಕಳಕಿ, ಕೊರ್ತಿ ಪುನರ್ವಸತಿ ಕೇಂದ್ರಗಳಲ್ಲೆಗ ಗೋವಿನದಿನ್ನಿಯ ಪ್ರಾಣ ದೇವರು ಗೋವಿನದಿನ್ನೇಶ ಜಾತ್ರೆ ಏ. 18ರಂದು ಸಂಜೆ ನಡೆಯಲಿದೆ.
ಅಂದಿನ ಮುಧೋಳ ಸಂಸ್ಥಾನಿಕರ ಆಳ್ವಿಕೆಗೊಳಪಟ್ಟಿದ್ದ ಈ ಪ್ರದೇಶದಲ್ಲಿ ಸುಮಾರು 36ಎಕರೆಯಷ್ಟು ಜಮೀನನ್ನು ಮುಧೋಳದ ಘೋರ್ಪಡೆ ಮಹಾರಾಜರು ದೇವಸ್ಥಾನಕ್ಕೆ ದಾನರೂಪವಾಗಿ ಕೊಟ್ಟಿದ್ದಾರೆಂದು ದಾಖಲೆಗಳು ಹೇಳುತ್ತವೆ. 1630ರಲ್ಲಿ ಪ್ರಾಣ ದೇವರಿಗೆ ದೇವಾಲಯ ಒಂದನ್ನು ನಿರ್ಮಿಸಲಾಯಿತೆಂದು ಹೇಳಲಾಗುತ್ತಿದೆ.