ರೈತರ ಸಾಲಮನ್ನಾ ಮಾಡಬೇಕು. ಜಿಎಲ್ಬಿಸಿ ಕಾಲುವೆಗೆ ನೀರು ಹರಿಸಬೇಕು. ನಗರದಲ್ಲಿ ಗೋಶಾಲೆಗೆ ಮುಂದುವರಿಸಲು ಬೇರೆಡೆ ಸ್ಥಳಾವಕಾಶ ಮಾಡಿ ಕೊಡಬೇಕು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾಕಾರರು ಒತ್ತಾಯಿಸಿದರು.ಗಂಗಾಧರ ಮೇಟಿ, ಬಾಬು ಹಸರಡ್ಡಿ, ತುಕಾರಾಮ ಮ್ಯಾಗಿನಮನಿ, ಶೇಖರ ಬೂದಿ, ರಮೇಶ ಬೀಳಗಿ, ಅಣ್ಣವ್ವ ನಿಂಗಸಾನಿ, ಪದ್ದವ್ವ ಜೀರಗಾಳ, ಶಿವಪ್ಪ ಕಡಪಟ್ಟಿ, ಗುರುಪಾದ ಮ್ಯಾಗಿನಮನಿ ಇತರರು ಧರಣಿಯ ನೇತೃತ್ವ ವಹಿಸಿದ್ದರು.