ಇಲ್ಲಿನ ಪುಣ್ಯಮೂರ್ತಿ ವೃತ್ತದ ಶಾರದಾ ಬುಕ್ಸ್ಟಾಲ್ನವರಿಗೆ ಐ.ಸಿ.ಐ.ಸಿ.ಐ. ಬ್ಯಾಂಕಿನವರು ಒಂದು ತಿಂಗಳ ದಿನಪತ್ರಿಕೆಯ ಹಣವನ್ನು ಮೇ 23ರಂದು ₨300 ಅನ್ನು ಚೆಕ್ ರೂಪದಲ್ಲಿ ನೀಡಿದ್ದಾರೆ. ಬುಕ್ಸ್ಟಾಲ್ ಮಾಲೀಕ ವೆಂಕಟೇಶ್ ಕುಡಿತಿನಿ ಅವರು ಆ ಚೆಕ್ ಅನ್ನು ನಗರದ ಇಂಡಿಯನ್ ಬ್ಯಾಂಕಿನ ಅವರ ಖಾತೆಗೆ ಇದೇ 14ರಂದು ಜಮಾ ಮಾಡಿದ್ದಾರೆ. ಐ.ಸಿ.ಐ.ಸಿ.ಐ. ಬ್ಯಾಂಕಿನ ಕನೆಕ್ಟಿವಿಟಿ ಸಮಸ್ಯೆಯಿಂದ ಇಂಡಿಯನ್ ಬ್ಯಾಂಕಿನವರು ಚೆಕ್ ಹಿಂತಿರುಗಿಸಿದ್ದಾರೆ. ಅಷ್ಟೇ ಅಲ್ಲ, ವೆಂಕಟೇಶ್ ಅವರ ಖಾತೆಯಿಂದ ₨250 ಕಡಿತ ಮಾಡಿಕೊಂಡಿದ್ದಾರೆ. ‘ಖಾತೆಯಿಂದ ₨250 ಕಡಿತಗೊಳಿಸಿದ್ದೇಕೆ ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕರನ್ನು ಪ್ರಶ್ನಿಸಿದರೆ, ಇದನ್ನೆಲ್ಲ ನಮಗೆ ಕೇಳಬೇಡಿ. ಚೆಕ್ ಕೊಟ್ಟಿರುವ ಐ.ಸಿ.ಐ.ಸಿ.ಐ. ಬ್ಯಾಂಕಿನವರನ್ನು ಕೇಳಿ ಎಂದು ಉಡಾಫೆಯಾಗಿ ಪ್ರತಿಕ್ರಿಯಿಸಿದ್ದಾರೆ. ₨250 ಕಡಿತಗೊಳಿಸಿರುವುದಕ್ಕೆ ನಿಖರ ಕಾರಣ ನೀಡುತ್ತಿಲ್ಲ’ ಎಂದು ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.