ಪಟ್ಟಣದ ನಿವಾಸಿಗಳಾದ ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ ಏಕೈಕ ಪುತ್ರಿ ಪ್ರಿಯದರ್ಶಿನಿ ಮನೆಯಲ್ಲಿ ಆಡುವಾಗ ಮೆಂಥೋಪ್ಲಸ್ ಡಬ್ಬಿ ನುಂಗಿದ್ದಾಳೆ. ಆಕೆ ಅಳುತ್ತಾ ಬಂದಾಗ, ತುಳಸಿ ಅವರು ಗಂಟಲಲ್ಲಿ ಸಿಲುಕಿದ್ದ ಡಬ್ಬಿ ತೆೆಗೆಯಲು ಪ್ರಯತ್ನಿಸಿದ್ದಾರೆ. ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ತಕ್ಷಣವೇ ವೈದ್ಯರ ಬಳಿ ಮಗುವನ್ನು ಕರೆದೊಯ್ಯಲಾಗಿದೆ. ಆದರೆ, ಪ್ರಯೋಜನವಾಗಲಿಲ್ಲ. ಈ ದಂಪತಿಗೆ ವಿವಾಹವಾಗಿ 10ವರ್ಷಗಳ ಬಳಿಕ ಮಗು ಜನಿಸಿತ್ತು.