ನೋವಿನಲ್ಲೂ ಅಜ್ಜಿಯ ಕಣ್ಣುಗಳನ್ನು ದಾನ ಮಾಡಿ, ಕುಟುಂಬ ಸಾರ್ಥಕತೆ ಮೆರೆದಿದೆ. ಏಳು ತಿಂಗಳ ಹಿಂದೆ ಮನೆಯಲ್ಲಿ ನಡೆದ ಮದುವೆ ಸಮಾರಂಭದ ದಿನ ಕುರುಬರ ಕೊಟ್ರಬಸಪ್ಪ ಅವರ ಇಡೀ ಕುಟುಂಬ ಸದಸ್ಯರು, ಸತ್ತ ನಂತರ ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞೆ ಸ್ವೀಕರಿಸಿ, ನೇತ್ರದಾನಕ್ಕೆ ಸಂಬಂಧಿಸಿದ ಪತ್ರಕ್ಕೆ ಸಹಿ ಹಾಕಿದ್ದರು. ಈಗ ಅಂದುಕೊಂಡಂತೆ ನಡೆದುಕೊಂಡಿದ್ದಾರೆ.