<p><strong>ತೆಕ್ಕಲಕೋಟೆ</strong>: ಸಮೀಪದ ಕರೂರು ಗ್ರಾಮದ ರೈತ ಹನುಮಂತಪ್ಪ ಇವರಿಗೆ ಸೇರಿದ ಮೂರು ಹುಲ್ಲಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಮಂಗಳವಾರ ನಡೆದಿದೆ.</p>.<p>ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಚಂದ್ರಣ್ಣ ನೇತೃತ್ವದ ತಂಡ ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟರು. ಈ ಕಾರ್ಯದಲ್ಲಿ ಜೆಸಿಬಿ ಬಳಸಿ ಬೆಂಕಿ ಇತರೆಡೆ ಹರಡದಂತೆ ಪ್ರಯತ್ನಿಸಲಾಯಿತು.</p>.<p>‘ಕರೂರು ಗಾಮದ ಬಡಿಗೇರ್ ತೋಟದ ರೈತ ಹನುಮಂತಪ್ಪ ಇವರಿಗೆ ಸೇರಿದ ಅಂದಾಜು ₹80 ಸಾವಿರ ಮೌಲ್ಯದ ಸುಮಾರು 25 ರಿಂದ 30 ಎಕರೆ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ತಗುಲಿದ್ದು ಬಣವೆಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ' ಎಂದು ಸಿರುಗುಪ್ಪ ಅಗ್ನಿಶಾಮಕ ಠಾಣಾಧಿಕಾರಿ ತಿಳಿಸಿದ್ದಾರೆ.<br> ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಶೇಕಾವಲಿ, ಲಿಂಗರಾಜು, ನಾಗರಾಜ, ಚಾಲಕ ಸಚಿನ, ತಂತ್ರಜ್ಞ ವಿಜಯ್ ಕುಮಾರ್ ಪಾಟೀಲ್ ಹಾಗೂ ಸಾಗರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ</strong>: ಸಮೀಪದ ಕರೂರು ಗ್ರಾಮದ ರೈತ ಹನುಮಂತಪ್ಪ ಇವರಿಗೆ ಸೇರಿದ ಮೂರು ಹುಲ್ಲಿನ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಮಂಗಳವಾರ ನಡೆದಿದೆ.</p>.<p>ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಚಂದ್ರಣ್ಣ ನೇತೃತ್ವದ ತಂಡ ಬೆಂಕಿ ನಂದಿಸುವಲ್ಲಿ ಹರಸಾಹಸಪಟ್ಟರು. ಈ ಕಾರ್ಯದಲ್ಲಿ ಜೆಸಿಬಿ ಬಳಸಿ ಬೆಂಕಿ ಇತರೆಡೆ ಹರಡದಂತೆ ಪ್ರಯತ್ನಿಸಲಾಯಿತು.</p>.<p>‘ಕರೂರು ಗಾಮದ ಬಡಿಗೇರ್ ತೋಟದ ರೈತ ಹನುಮಂತಪ್ಪ ಇವರಿಗೆ ಸೇರಿದ ಅಂದಾಜು ₹80 ಸಾವಿರ ಮೌಲ್ಯದ ಸುಮಾರು 25 ರಿಂದ 30 ಎಕರೆ ಭತ್ತದ ಹುಲ್ಲಿನ ಬಣವೆಗೆ ಬೆಂಕಿ ತಗುಲಿದ್ದು ಬಣವೆಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ' ಎಂದು ಸಿರುಗುಪ್ಪ ಅಗ್ನಿಶಾಮಕ ಠಾಣಾಧಿಕಾರಿ ತಿಳಿಸಿದ್ದಾರೆ.<br> ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಶೇಕಾವಲಿ, ಲಿಂಗರಾಜು, ನಾಗರಾಜ, ಚಾಲಕ ಸಚಿನ, ತಂತ್ರಜ್ಞ ವಿಜಯ್ ಕುಮಾರ್ ಪಾಟೀಲ್ ಹಾಗೂ ಸಾಗರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>