ಬಳ್ಳಾರಿ: ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿಗೆ ನಗರದ ತಮ್ಮ ಮನೆಯಲ್ಲಿ ಜಿ.ಜನಾರ್ದನ ರೆಡ್ಡಿ ಗುರುವಾರ ಪಾದಪೂಜೆ ಮಾಡಿದರು.
‘ರೆಡ್ಡಿಯವರು ಕಾಶಿ ಪೀಠದಲ್ಲಿ ಲಿಂಗಧಾರಣೆ ಮಾಡಿಕೊಂಡಿದ್ದರು, ಅಂದಿನಿಂದ ನಿಷ್ಠೆ ಭಕ್ತಿಯಿಂದ ಲಿಂಗ ಪೂಜೆ ಮಾಡುತ್ತಿದ್ದಾರೆ. ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದಲಿದ್ದಾರೆ’ ಎಂದು ಶಿವಾಚಾರ್ಯ ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.
‘ಸ್ವಾಮೀಜಿ ಮಾತಿನಂತೆ ನಾನು ಎಲ್ಲ ಆರೋಪಗಳಿಂದ ಶೀಘ್ರ ಮುಕ್ತವಾಗುವೆ’ ಎಂದು ರೆಡ್ಡಿ ತಿಳಿಸಿದರು.