ಮೆರವಣಿಗೆಯಲ್ಲಿ ನಗರದ ರಾಣಿಪೇಟೆಯಲ್ಲಿ ಪ್ರತಿಷ್ಠಾಪಿಸಿದ್ದ ಏಕದಂತ ಮಿತ್ರವೃಂದ ಗಣೇಶ ಮಂಡಳಿ ಎಲ್ಲರ ಗಮನ ಸೆಳೆಯಿತು. ಮುಂಬೈ, ಪುಣೆ, ಬೆಳಗಾವಿ, ಕೇರಳದ ಕಲಾ ತಂಡಗಳ ಡೊಳ್ಳು, ತಾಷಾ ರಂಡೋಲ್ ಮೈನವಿರೇಳಿಸುವಂತೆ ಮಾಡಿತು. ಗಣಪನ ಪ್ರತಿಷ್ಠಾಪಿಸಿದ್ದ ಟ್ರ್ಯಾಕ್ಟರ್ ಅನ್ನು ಅನರ್ಹ ಶಾಸಕ ಆನಂದ್ ಸಿಂಗ್ ಚಲಾಯಿಸಿ ಗಮನ ಸೆಳೆದರು. ಅವರ ತಂದೆ ಪೃಥ್ವಿರಾಜ್ ಸಿಂಗ್, ಪತ್ನಿ ಲಕ್ಷ್ಮಿ ಸಿಂಗ್ ಸೇರಿದಂತೆ ಕುಟುಂಬದ ಇತರೆ ಸದಸ್ಯರು ಅವರಿಗೆ ಸಾಥ್ ನೀಡಿದರು. ಇದಕ್ಕೂ ಮುನ್ನ ರಾಣಿಪೇಟೆಯಲ್ಲಿ ರಂಗೋಲಿ ಬಿಡಿಸುವ ಸ್ಪರ್ಧೆ ನಡೆಯಿತು. ಯುವತಿಯರು, ಮಹಿಳೆಯರು ಪಾಲ್ಗೊಂಡು ರಸ್ತೆಯ ತುಂಬೆಲ್ಲ ಬಗೆಬಗೆಯ ರಂಗೋಲಿ ಬಿಡಿಸಿದರು.