‘ದೇವಸ್ಥಾನಕ್ಕೆ ವೀರಶೈವರು, ಲಿಂಗಾಯತರು, ಕುರುಬರು, ವಾಲ್ಮೀಕಿ, ಉಪ್ಪಾರರು, ಗಂಗಾಮತಸ್ಥರು ಸೇರಿ ಎಲ್ಲ ಸವರ್ಣೀಯ ಜನಾಂಗದವರು ಬರುತ್ತಾರೆ, ಭಕ್ತಿಭಾವದಿಂದ ಪಾಲ್ಗೊಂಡು ಅರ್ಚಕರಿಗೆ ನಮಿಸುತ್ತಾರೆ. ಇಲ್ಲಿ ಯಾವುದೇ ತಾರತಮ್ಯ ಮಾಡದೇ ಎಲ್ಲರೂ ಪಾಲ್ಗೊಳ್ಳುತ್ತಾರೆ’ ಎಂದು ಅರ್ಚಕ ಪೂಜಾರಿ ಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.