ಸಿದ್ದಪ್ಪ, ಶಿವರಾಜ ಹಾಗೂ ರಾಜಪ್ಪ ಎಂಬುವರು ಹೊಲದಲ್ಲಿ ನೀರು ಕಟ್ಟಲು ಹೋಗಿದ್ದಾರೆ. ಈ ವೇಳೆ ಗುಡುಗು, ಮಿಂಚಿನ ಸಮೇತ ಮಳೆ ಆರಂಭವಾಗಿದೆ. ಈ ವೇಳೆ ಮನೆಗೆ ಹಿಂತಿರುಗುವಾಗ ಸಿಡಿಲು ಬಡಿದಿದ್ದು, ಸಿದ್ದಪ್ಪ ಸ್ಥಳದಲ್ಲೇ ಮೃತಪಟ್ಟರೆ, ಶಿವರಾಜ ಹಾಗೂ ರಾಜಪ್ಪ ಅವರಿಗೆ ಸಣ್ಣ ಗಾಯಗಳಾಗಿವೆ. ಮಹಾದೇವಪ್ಪ ಎಂಬುವರಿಗೆ ಸೇರಿದ ಎತ್ತು ಕೂಡ ಬಲಿಯಾಗಿದೆ.