<p><strong>ತೆಕ್ಕಲಕೋಟೆ:</strong> ಕಳೆದ ಎರಡು ತಿಂಗಳಿನಿಂದ ಇಲ್ಲಿನ 'ಗೌಡ್ರಮೂಲೆ' 'ಬಾಳೇತೋಟ' ಬೆಟ್ಟಪ್ರದೇಶಗಳಲ್ಲಿ ನಡೆಯುತ್ತಿರುವ ಉತ್ಖನನ ಅಂತಿಮ ಹಂತದ ಕಾರ್ಯಾಚರಣೆ ನಡೆಯುತ್ತಿದ್ದು, ಬುಧವಾರ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದರು.</p>.<p>ಮಾನವನ ಎರಡು ಅಸ್ಥಿಪಂಜರ ದೊರೆತ ಸ್ಥಳದಲ್ಲಿ ಹಾಜರಿದ್ದ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ಅವರೊಂದಿಗೆ ಮಾತನಾಡಿ, ಇದೇ ಸ್ಥಳದಲ್ಲಿ ಮಾನವನ ಅಸ್ಥಿಪಂಜರ ಇದೆ ಎಂದು ಹೇಗೆ ಗುರುತಿಸಿದಿರಿ ಎಂದು ಕುತೂಹಲದಿಂದ ಕೇಳಿದರು.</p>.<p>'ಮಡಿಕೆ ಚೂರು, ಕಬ್ಬಿಣದ ಅದಿರು, ಎಲುಬಿನ ಚೂರು ಹಾಗೂ ಇತರೆ ಪ್ರಾಚೀನ ವಸ್ತುಗಳು ಈ ಸ್ಥಳದಲ್ಲಿ ಗೋಚರಿಸಿದವು. ಆರಂಭದಲ್ಲಿ ಇಲ್ಲಿ ನಮಗೆ ಸಂಪೂರ್ಣ ಅಸ್ಥಿಪಂಜರ ಸಿಗುವ ನಿರೀಕ್ಷೆ ಇರಲಿಲ್ಲ. ಶೋಧಕಾರ್ಯ ಮುಂದುವರೆಸಿದಾಗ, ಅದೃಷ್ಟವಶಾತ್ ಒಂದು ಸಂಪೂರ್ಣ ಹಾಗೂ ಮತ್ತೊಂದು ಭಾಗಶಃ ಅಸ್ಮಿಪಂಜರ ದೊರತಿರುವುದು ಉತ್ಖನನ ಕಾರ್ಯಕ್ಕೆ ಅರ್ಥ ಕಲ್ಪಿಸಿದೆ" ಎಂದು ಹೇಳಿದರು.</p>.<p>'ಪ್ರಾಖ್ತನಶಾಸ್ತ್ರವು ಕೆಲವೊಮ್ಮೆಅದೃಷ್ಟ ಎಂಬಂತೆ ಕಂಡುಬಂದರೂ, ನಿರಂತರ ಪರಿಶ್ರಮ ಇದ್ದಲ್ಲಿ ಈ ರೀತಿಯ ಫಲಿತಾಂಶ ಬರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ' ಎಂದರು.</p>.<p>ಮಡಿಕೆಗಳು ದೊರೆತ ಸ್ಥಳಕ್ಕೆ ಭೇಟಿ ನೀಡಿದ ಅವರು ಸ್ಥಳದಲ್ಲಿ ಉತ್ಖತನ ಕಾರ್ಯದಲ್ಲಿ ತೊಡಗಿದ್ದ, ರಾಬರ್ಟ್ ಬ್ರೂಸ್ ಪೂಟ್ ವಸ್ತುಸಂಗ್ರಹಾಲಯದ ತಾಂತ್ರಿಕ ಸಹಾಯಕಿ ಗೌರಿ ಅವರೊಂದಿಗೆ ಶವಸಂಸ್ಕಾರದ ಎರಡನೇ ವಿಧಾನವಾದ ಮಡಿಕೆಯಲ್ಲಿ ಅಸ್ಥಿಸಂಸ್ಕಾರ ಪದ್ದತಿ ಕುರಿತು ಹೆಚ್ಚಿನ ಮಾಹಿತಿ ಪಡೆದರು.</p>.<p>ದೊಡ್ಡಗಾತ್ರದ ಮೂರು ಮಡಿಕೆ ಹಾಗೂ ಚಿಕ್ಕಗಾತ್ರದ ನಾಲ್ಕು ಮಡಕೆಗಳು ದೊರೆತಿದ್ದು, ಇವುಗಳನ್ನು ಜೋಪಾನವಾಗಿ ತೆಗೆಯುವ ಕಾರ್ಯ ನಡೆಯುತ್ತಿದೆ. ಈ ಸ್ಥಳದಲ್ಲಿ ಆಹಾರಧಾನ್ಯ ದೊರೆತಿರುವುದು ಮಹತ್ವದ ಸಂಗತಿ ಎಂದು ತಿಳಿಸಿದರು.</p>.<p>'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಎಸ್ಪಿ ಪನ್ನೇಕರ, ‘ಐತಿಹಾಸಿಕ ಕಾಲದ ಬಗೆಗಿನ ವೈಯಕ್ತಿಕ ಆಸಕ್ತಿ ಹಾಗೂ ಮಾಧ್ಯಮದಲ್ಲಿ ವರದಿ ನನ್ನನ್ನು ಇಲ್ಲಿಗೆ ಬರುವಂತೆ ಮಾಡಿತು‘ ಎಂದರು.</p>.<p>ಸಿರುಗುಪ್ಪ ತಹಶೀಲ್ದಾರ್ ಗೌಸಿಯಾಬೇಗಂ, ಸಿರುಗುಪ್ಪ ಡಿವೈಎಸ್ ಪಿ ಮಾಲತೇಶ ಕೊನಬೇವು, ಸಿಪಿಐ ಹನುಮಂತಪ್ಪ ವೈ, ತೆಕ್ಕಲಕೋಟೆ ಸಿಪಿಐ ಚಂದನ್ ಗೋಪಾಲ್, ಪಿಎಸ್ಐ ಸದ್ದಾಂ ಹುಸೇನ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಡ್ಡೇರು ಸಿದ್ದಯ್ಯ, ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ:</strong> ಕಳೆದ ಎರಡು ತಿಂಗಳಿನಿಂದ ಇಲ್ಲಿನ 'ಗೌಡ್ರಮೂಲೆ' 'ಬಾಳೇತೋಟ' ಬೆಟ್ಟಪ್ರದೇಶಗಳಲ್ಲಿ ನಡೆಯುತ್ತಿರುವ ಉತ್ಖನನ ಅಂತಿಮ ಹಂತದ ಕಾರ್ಯಾಚರಣೆ ನಡೆಯುತ್ತಿದ್ದು, ಬುಧವಾರ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದರು.</p>.<p>ಮಾನವನ ಎರಡು ಅಸ್ಥಿಪಂಜರ ದೊರೆತ ಸ್ಥಳದಲ್ಲಿ ಹಾಜರಿದ್ದ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ಅವರೊಂದಿಗೆ ಮಾತನಾಡಿ, ಇದೇ ಸ್ಥಳದಲ್ಲಿ ಮಾನವನ ಅಸ್ಥಿಪಂಜರ ಇದೆ ಎಂದು ಹೇಗೆ ಗುರುತಿಸಿದಿರಿ ಎಂದು ಕುತೂಹಲದಿಂದ ಕೇಳಿದರು.</p>.<p>'ಮಡಿಕೆ ಚೂರು, ಕಬ್ಬಿಣದ ಅದಿರು, ಎಲುಬಿನ ಚೂರು ಹಾಗೂ ಇತರೆ ಪ್ರಾಚೀನ ವಸ್ತುಗಳು ಈ ಸ್ಥಳದಲ್ಲಿ ಗೋಚರಿಸಿದವು. ಆರಂಭದಲ್ಲಿ ಇಲ್ಲಿ ನಮಗೆ ಸಂಪೂರ್ಣ ಅಸ್ಥಿಪಂಜರ ಸಿಗುವ ನಿರೀಕ್ಷೆ ಇರಲಿಲ್ಲ. ಶೋಧಕಾರ್ಯ ಮುಂದುವರೆಸಿದಾಗ, ಅದೃಷ್ಟವಶಾತ್ ಒಂದು ಸಂಪೂರ್ಣ ಹಾಗೂ ಮತ್ತೊಂದು ಭಾಗಶಃ ಅಸ್ಮಿಪಂಜರ ದೊರತಿರುವುದು ಉತ್ಖನನ ಕಾರ್ಯಕ್ಕೆ ಅರ್ಥ ಕಲ್ಪಿಸಿದೆ" ಎಂದು ಹೇಳಿದರು.</p>.<p>'ಪ್ರಾಖ್ತನಶಾಸ್ತ್ರವು ಕೆಲವೊಮ್ಮೆಅದೃಷ್ಟ ಎಂಬಂತೆ ಕಂಡುಬಂದರೂ, ನಿರಂತರ ಪರಿಶ್ರಮ ಇದ್ದಲ್ಲಿ ಈ ರೀತಿಯ ಫಲಿತಾಂಶ ಬರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ' ಎಂದರು.</p>.<p>ಮಡಿಕೆಗಳು ದೊರೆತ ಸ್ಥಳಕ್ಕೆ ಭೇಟಿ ನೀಡಿದ ಅವರು ಸ್ಥಳದಲ್ಲಿ ಉತ್ಖತನ ಕಾರ್ಯದಲ್ಲಿ ತೊಡಗಿದ್ದ, ರಾಬರ್ಟ್ ಬ್ರೂಸ್ ಪೂಟ್ ವಸ್ತುಸಂಗ್ರಹಾಲಯದ ತಾಂತ್ರಿಕ ಸಹಾಯಕಿ ಗೌರಿ ಅವರೊಂದಿಗೆ ಶವಸಂಸ್ಕಾರದ ಎರಡನೇ ವಿಧಾನವಾದ ಮಡಿಕೆಯಲ್ಲಿ ಅಸ್ಥಿಸಂಸ್ಕಾರ ಪದ್ದತಿ ಕುರಿತು ಹೆಚ್ಚಿನ ಮಾಹಿತಿ ಪಡೆದರು.</p>.<p>ದೊಡ್ಡಗಾತ್ರದ ಮೂರು ಮಡಿಕೆ ಹಾಗೂ ಚಿಕ್ಕಗಾತ್ರದ ನಾಲ್ಕು ಮಡಕೆಗಳು ದೊರೆತಿದ್ದು, ಇವುಗಳನ್ನು ಜೋಪಾನವಾಗಿ ತೆಗೆಯುವ ಕಾರ್ಯ ನಡೆಯುತ್ತಿದೆ. ಈ ಸ್ಥಳದಲ್ಲಿ ಆಹಾರಧಾನ್ಯ ದೊರೆತಿರುವುದು ಮಹತ್ವದ ಸಂಗತಿ ಎಂದು ತಿಳಿಸಿದರು.</p>.<p>'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಎಸ್ಪಿ ಪನ್ನೇಕರ, ‘ಐತಿಹಾಸಿಕ ಕಾಲದ ಬಗೆಗಿನ ವೈಯಕ್ತಿಕ ಆಸಕ್ತಿ ಹಾಗೂ ಮಾಧ್ಯಮದಲ್ಲಿ ವರದಿ ನನ್ನನ್ನು ಇಲ್ಲಿಗೆ ಬರುವಂತೆ ಮಾಡಿತು‘ ಎಂದರು.</p>.<p>ಸಿರುಗುಪ್ಪ ತಹಶೀಲ್ದಾರ್ ಗೌಸಿಯಾಬೇಗಂ, ಸಿರುಗುಪ್ಪ ಡಿವೈಎಸ್ ಪಿ ಮಾಲತೇಶ ಕೊನಬೇವು, ಸಿಪಿಐ ಹನುಮಂತಪ್ಪ ವೈ, ತೆಕ್ಕಲಕೋಟೆ ಸಿಪಿಐ ಚಂದನ್ ಗೋಪಾಲ್, ಪಿಎಸ್ಐ ಸದ್ದಾಂ ಹುಸೇನ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಡ್ಡೇರು ಸಿದ್ದಯ್ಯ, ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>