‘ತುಂಗಭದ್ರಾ ನದಿಪಾತ್ರದ ಸಣಾ ಪುರದ 668 ಹೆಕ್ಟೇರ್, ಅರಳಿಹಳ್ಳಿಯ 497ಹೆ., ಇಟಗಿಯ 1219 ಹೆ., ಮಣ್ಣೂರು–ಸೂಗೂರು ಪ್ರದೇಶದ ಸಾವಿರಾರು ಎಕರೆ ಭೂಮಿಯಲ್ಲಿ ಪ್ರತಿ ಮುಂಗಾರಿನಲ್ಲಿ ಭತ್ತ ನಾಟಿಯಾಗಿ ಈ ವೇಳೆಗೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ ನೀರಿನ ಕೊರತೆಯಾದ ಕಾರಣ ಹೊಲದಲ್ಲಿ ನಡೆದಿಲ್ಲ’ ಎಂದು ರೈತರು ಮಾಹಿತಿ ನೀಡಿದರು.